ಕರ್ನಾಟಕ

karnataka

ETV Bharat / state

ಈಜಲು ಹೋದ 4 ಬಾಲಕರು ನೀರಲ್ಲಿ ಮುಳುಗಿ ಸಾವು: ಮಕ್ಕಳ ಮುಡಿ ಹರಕೆ ತೀರಿಸಲು ಹೋದ ಸಹೋದರರು ನೀರುಪಾಲು - ಮೈಸೂರಲ್ಲಿ ಬಾಲಕರ ಸಾವು

ನಾಲ್ವರು ಬಾಲಕರು ಈಜುಲು ಹೋಗಿ ಮೃತಪಟ್ಟ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ. ಹಾಗೆಯೇ ತಮ್ಮ ಮಕ್ಕಳ ಮುಡಿ ಹರಕೆ ತೀರಿಸಲು ಹೋದ ಸಹೋದರರು ನೀರು ಪಾಲಾಗಿದ್ದಾರೆ.

ಈಜಲು ಹೋದ ನಾಲ್ವರು ಬಾಲಕರು ನೀರಲ್ಲಿ ಮುಳುಗಿ ಸಾವು
ಈಜಲು ಹೋದ ನಾಲ್ವರು ಬಾಲಕರು ನೀರಲ್ಲಿ ಮುಳುಗಿ ಸಾವು

By

Published : Apr 22, 2021, 8:17 PM IST

Updated : Apr 22, 2021, 9:02 PM IST


ಮೈಸೂರು:ಎರಡು ಪ್ರತ್ಯೇಕ ಪ್ರಕರಣಳಲ್ಲಿ‌ 6 ಜನ ಒಂದೇ ದಿನ ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಮೈಸೂರು ಜಿಲ್ಲೆಯ ಟಿ ನರಸಿಪುರ ತಾಲೂಕಿನ ತಲಕಾಡು ಹೋಬಳಿ ಹೆಮ್ಮಿಗೆ ಬಿ ಗ್ರಾಮದ 4 ಬಾಲಕರು ಶಾಲೆಗೆ ರಜೆ ಇದ್ದ ಕಾರಣ ಕಾವೇರಿ ನದಿಯಲ್ಲಿ ಈಜಲು ಹೋದಾಗ ಸುಳಿಯಲ್ಲಿ ಸಿಲುಕಿ‌ ಮೃತಪಟ್ಟಿದ್ದಾರೆ. ಯಶವಂತ ಕುಮಾರ್(15), ಮಹದೇವಪ್ರಸಾದ್ (14), ಆಕಾಶ್ (15) ಹಾಗೂ ಕಿಶೋರ್(13) ಮೃತ ಬಾಲಕರು. ಇವರು ಪ್ರಾಢ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳಾಗಿದ್ದಾರೆ .

ಸಂಜೆಯ ವೇಳೆಗೆ ಯಶ್ವಂತ್ ಕುಮಾರ್, ಮಹದೇವಪ್ರಸಾದ್ ಮೃತದೇಹಗಳು ದೊರೆತಿದ್ದು, ಇನ್ನಿಬ್ಬರಿಗಾಗಿ ಶೋಧ ನಡೆದಿದೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ರಜೆ ಘೋಷಣೆ ಮಾಡದಿದ್ದರೆ ನಮ್ಮ ಮಕ್ಕಳು ಬದುಕುಳಿಯುತ್ತಿದ್ದರೆಂದು ಪೋಷಕರು ಸರ್ಕಾರಕ್ಕೆ ಹಿಡಿ ಶಾಪ ಹಾಕಿದ್ದಾರೆ.


ಸುದ್ದಿ ತಿಳಿದ ತಕ್ಷಣ ಕ್ಷೇತ್ರದ ಶಾಸಕ ಎಂ.ಅಶ್ವಿನ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ದೇವಾಸ್ಥಾನಕ್ಕೆ ಪೂಜೆಗೆ ಬಂದ ಇಬ್ಬರು ನೀರು ಪಾಲು:

ಹುಣಸೂರು ತಾಲೂಕಿನ ಮಲ್ಲಿನಾಥಪುರ ಗ್ರಾಮದ ಇಬ್ಬರು ಸಹೋದರರಾದ ಬಸವರಾಜು(30) ಹಾಗೂ ಜವರೇಗೌಡ(32) ಅವರು ತಮ್ಮ ಮಕ್ಕಳ ಮುಡಿ ಹರಕೆ ತಿರಿಸಲು ಶ್ರೀರಂಗಪಟ್ಟಣ ತಾಲೂಕಿನ ಕೆ.ಆರ್.ಎಸ್.ಬಳಿಯ ಕಾಳಮ್ಮ ದೇವಾಲಯಕ್ಕೆ ಬಂದಿದ್ದರು. ಹರಕೆ ವೇಳೆ ಸ್ನಾನ ಮಾಡಲು ವಿಶ್ವೇಶ್ವರಯ್ಯ ನಾಲೆಗೆ ಇಳಿದಾಗ ನೀರನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ.

Last Updated : Apr 22, 2021, 9:02 PM IST

ABOUT THE AUTHOR

...view details