ಕರ್ನಾಟಕ

karnataka

ETV Bharat / state

ಹೃದಯಾಘಾತದಿಂದ ಸಾವನ್ನಪ್ಪಿದ 26 ವರ್ಷದ ಪೇದೆ - ಮಹೇಶ್​

ಟ್ರಾಫಿಕ್​ ಪೋಲಿಸ್​ ವಿಭಾಗದಲ್ಲಿ ಕಾರ್ಯ ನಿವರ್ಹಿಸುತ್ತಿದ್ದ 26 ವರ್ಷದ ಪೇದೆಯೊಬ್ಬ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

ಪೇದೆ

By

Published : Jul 3, 2019, 4:13 AM IST

ಮೈಸೂರು: ರಜೆಯ ಮೇಲೆ ಊರಿಗೆ ಬಂದ ಸಂಚಾರಿ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪೇದೆ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಹುಣಸೂರು ತಾಲ್ಲೂಕು ಮೇದೂರು ಎ.ಕೊಪ್ಪಲಿನಲ್ಲಿ ನಡೆದಿದೆ.

ಹೃದಯಾಘಾತಕ್ಕೆ ಬಲಿಯಾದ ಪೇದೆ

26 ವರ್ಷದ ಮಹೇಶ್​ ಎಂಬುವವತೆ ಹೃದಯಾಘಾತದಿಂದ ಮೃತ ಪಟ್ಟ ಪೇದೆ. ಈತ ನಂಜನಗೂಡು ಸಂಚಾರಿ ಠಾಣೆಯಲ್ಲಿ ಟ್ರಾಫಿಕ್ ಪೇದೆಯಾಗಿ ಕೆಲಸ ನಿರ್ವಹಿಸುತ್ತಿದ್ದ. ನೆನ್ನೆ ರಜೆಯ ಮೇಲೆ ಊರಿಗೆ ಬಂದಿದ್ದ ಮಹೇಶ್​ಸಂಜೆ ಸ್ನೇಹಿತರೊಂದಿಗೆ ಪಾರ್ಟಿ ಮಾಡಲು ಹುಣಸೂರಿನ‌ ರೆಸಾರ್ಟ್​ಗೆ ತೆರಳಿದ್ದರು. ಪಾರ್ಟಿ ಮುಗಿಸಿ ಪಾರ್ಟಿ ಮುಗಿಸಿ ವಾಪಸ್ ಬರುವಾಗ ಎದೆ ನೋವು ಕಾಣಿಸಿಕೊಂಡಿದ್ದು ತಕ್ಷಣ ಆತನನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾನೆ.

ಈ ಸಂಬಂಧ ಹುಣಸೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details