ಕರ್ನಾಟಕ

karnataka

By

Published : Nov 10, 2019, 8:47 PM IST

ETV Bharat / state

ಸಿಎಂ ಭರವಸೆಗಳೆಲ್ಲಾ ಕೇವಲ ಚುನಾವಣೆ ಗಿಮಿಕ್‌ ಅಷ್ಟೇ: ಶಾಸಕ ಸುರೇಶ್ ಗೌಡ

ಸಿಎಂ ಯಡಿಯೂರಪ್ಪ ಚಂದ್ರಲೋಕವನ್ನೇ ಕೆ.ಆರ್.ಪೇಟೆಗೆ ಇಳಿಸುತ್ತೇನೆ ಅಂತ ಭರವಸೆ ನೀಡುತ್ತಾರೆ. ಇದೆಲ್ಲ ಚುನಾವಣೆ ಗಿಮಿಕ್ ಎಂದು ಜೆಡಿಎಸ್ ಶಾಸಕ ಸುರೇಶ್ ಗೌಡ ವ್ಯಂಗ್ಯವಾಡಿದ್ದಾರೆ.

ಸಿಎಂಗೆ ಟಾಂಗ್ ನೀಡಿದ ಜೆಡಿಎಸ್ ಶಾಸಕ: ಕಾರಣ ಏನು...?

ಮಂಡ್ಯ: ಸಿಎಂ ಯಡಿಯೂರಪ್ಪ ಚಂದ್ರಲೋಕವನ್ನೇ ಕೆ.ಆರ್.ಪೇಟೆಗೆ ಇಳಿಸುತ್ತೇನೆ ಅಂತ ಭರವಸೆ ನೀಡುತ್ತಾರೆ. ಆದ್ರೆ ಇದೆಲ್ಲ ಚುನಾವಣೆ ಗಿಮಿಕ್ ಎಂದು ಜೆಡಿಎಸ್ ಶಾಸಕ ಸುರೇಶ್ ಗೌಡ ವ್ಯಂಗ್ಯವಾಡಿದ್ದಾರೆ.

ಸಿಎಂಗೆ ಟಾಂಗ್ ನೀಡಿದ ಜೆಡಿಎಸ್ ಶಾಸಕ: ಕಾರಣ ಏನು...?

ಕೆ.ಆರ್. ಪೇಟೆಗೆ ಮೆಡಿಕಲ್ ಕಾಲೇಜು ನೀಡುವ ಭರವಸೆ ನೀಡಿದ ಸಿಎಂ ಹಿಂದೆ ಅನುಮೋದನೆಯಾಗಿರುವ ಕಾಮಗಾರಿಗಳಿಗೆ ಹಣವಿಲ್ಲ ಎಂದು ತಡೆಹಿಡಿಯುತ್ತಿದ್ದಾರೆ. ಹಾಗಾದ್ರೆ, ಮೆಡಿಕಲ್ ಕಾಲೇಜುಗಳೇನು ಕಡ್ಲೇಕಾಯಿ ಅಂಗಡಿಗಳಾ ಎಂದು ಅವರು ಪ್ರಶ್ನೆ ಮಾಡಿದರು. ಇದು ರಾಜಕೀಯ ಗಿಮಿಕ್ ಅಷ್ಟೇ, ನಾರಾಯಣಗೌಡರನ್ನು ಕ್ಷೇತ್ರದಿಂದ ಅಭ್ಯರ್ಥಿ ಮಾಡಬಹುದು ಅನಿಸುತ್ತೆ, ಅದಕ್ಕೆ ಭರವಸೆ ನೀಡುತ್ತಿದ್ದಾರೆ. ಈ ಹಿಂದೆ ನೀಡಿದ ಭರವಸೆಗಳಲ್ಲಿ ಎಷ್ಟನ್ನು ಅವರು ಕಾರ್ಯರೂಪಕ್ಕೆ ತಂದಿದ್ದಾರೆ? ಮಾಧ್ಯಮಗಳೇ ಅವಲೋಕಿಸಿ ನೋಡಿ ಗೊತ್ತಾಗುತ್ತದೆ ಎಂದರು.

ಕಾಂಗ್ರೆಸ್-ಜೆಡಿಎಸ್ ಜಾತ್ಯತೀತ ತತ್ವದಲ್ಲಿರುವ ಪಕ್ಷಗಳು. ವರಿಷ್ಟರ ನಿರ್ಧಾರಕ್ಕೆ ನಾವೆಲ್ಲಾ ಬದ್ಧರಾಗಿರುತ್ತೇವೆ. ಜೆಡಿಎಸ್ ಪಕ್ಷದ ಯಾವೊಬ್ಬ ಶಾಸಕನೂ ಬೇರೆ ಪಕ್ಷಕ್ಕೆ ಹೋಗಲ್ಲ ಎಂದು ಹೇಳಿದರು.

ABOUT THE AUTHOR

...view details