ಕರ್ನಾಟಕ

karnataka

By

Published : Jul 18, 2020, 8:01 PM IST

ETV Bharat / state

28ರಂದು ಕಾವೇರಿ, ಕಬಿನಿಯಿಂದ ನಾಲೆಗಳಿಗೆ ನೀರು: ಸಚಿವರ ಘೋಷಣೆ

ಕಾವೇರಿ ಹಾಗೂ ಕಬಿನಿಯಿಂದ ಜುಲೈ 28ರಂದು ನಾಲೆಗಳಿಗೆ ನೀರು ಬಿಡಲಾಗುವುದು ಎಂದು ಸಹಕಾರ ಸಚಿವ ಎಸ್.‌ಟಿ.ಸೋಮಶೇಖರ್ ಹಾಗೂ ಪೌರಾಡಳಿತ ಸಚಿವ ನಾರಾಯಣಗೌಡ ಜಂಟಿಯಾಗಿ ಘೋಷಿಸಿದರು.

Kaveri Water Advisory Committee Meeting
ಕಾವೇರಿ ನೀರು ಸಲಹಾ ಸಮಿತಿ ಸಭೆ

ಮಂಡ್ಯ: ಕಾವೇರಿ ಹಾಗೂ ಕಬಿನಿ ಜಲಾಶಯದಿಂದ ಜುಲೈ 28ರಂದು ನಾಲೆಗಳಿಗೆ ನೀರು ಬಿಡಲಾಗುವುದು ಎಂದು ಸಹಕಾರ ಸಚಿವ ಎಸ್.‌ಟಿ.ಸೋಮಶೇಖರ್ ಹಾಗೂ ಪೌರಾಡಳಿತ ಸಚಿವ ನಾರಾಯಣಗೌಡ ಜಂಟಿಯಾಗಿ ಘೋಷಿಸಿದರು.

ಜಂಟಿಯಾಗಿ ಮಾತನಾಡಿದ ಸಚಿವರು

ಕೆ.ಆರ್.ಎಸ್‌ನ ಕಾವೇರಿ ಸಭಾಂಗಣದಲ್ಲಿ ಕಾವೇರಿ ನೀರು ಸಲಹಾ ಸಮಿತಿ ಸಭೆಯ ನಂತರ ಮಾಹಿತಿ ನೀಡಿದ ಸಚಿವರು, ನಾಲೆ ಕಾಮಗಾರಿ ಶೀಘ್ರವಾಗಿ ಮುಗಿಯಲಿದೆ. ಹೀಗಾಗಿ, 28ರಿಂದ ನೀರು ಬಿಡಲಾಗುವುದು. ಸವಡೆಗಳ ನೇಮಕಾತಿ ಶೀಘ್ರವಾಗಿ ಮಾಡಲಾಗುವುದು. ಸಾವಿರಕ್ಕೂ ಹೆಚ್ಚು ಸವಡೆಗಳ ನೇಮಕಾತಿ ನಡೆಯಲಿದೆ. ವೇತನ ಸಮಸ್ಯೆಯೂ ಬಗೆಹರಿಯಲಿದೆ ಎಂದು ಭರವಸೆ ನೀಡಿದರು.

ABOUT THE AUTHOR

...view details