ಕರ್ನಾಟಕ

karnataka

ETV Bharat / state

ಸೆಮಿಫೈನಲ್​​ನಲ್ಲಿ ಸೋತ ಭಾರತ: ಟಿವಿ ಒಡೆದ ಕ್ರಿಕೆಟ್ ಅಭಿಮಾನಿ - undefined

ಮೈಸೂರು ಹೆದ್ದಾರಿ ಸಮೀಪದ ಬೆಳ್ಳಿ ಬಿರಿಯಾನಿ ಪ್ಯಾರಾಡೈಸ್​ ಹೋಟೆಲ್​ ಮಾಲೀಕ ವಿಶ್ವಕಪ್​ನಲ್ಲಿ ಭಾರತ ಸೋತಿದ್ದಕ್ಕೆ ಟಿವಿಯನ್ನು ಒಡೆದು ಹಾಕಿದ್ದಾರೆ.

ವಿಶ್ವಕಪ್​ನಲ್ಲಿ ಭಾರತ ಸೋತಿದ್ದಕ್ಕೆ ಟಿವಿ ಒಡೆದ ಹೋಟೆಲ್​ ಮಾಲೀಕ

By

Published : Jul 10, 2019, 9:51 PM IST

ಮಂಡ್ಯ:ವಿಶ್ವಕಪ್ ಕ್ರಿಕೆಟ್​ ಸೆಮಿಫೈನಲ್​ನಲ್ಲಿ‌ ಭಾರತ ನ್ಯೂಜಿಲ್ಯಾಂಡ್​ ವಿರುದ್ಧದ ಪಂದ್ಯದಲ್ಲಿ ಸೋಲು ಕಂಡಿದ್ದು, ಈ ಹಿನ್ನಲೆಯಲ್ಲಿ ಹತಾಶೆಗೊಂಡ ಅಭಿಮಾನಿ ಅಂಗಡಿಯಲ್ಲಿದ್ದ ಟಿವಿ ಒಡೆದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಶ್ವಕಪ್​ನಲ್ಲಿ ಭಾರತ ಸೋತಿದ್ದಕ್ಕೆ ಟಿವಿ ಒಡೆದ ಹೋಟೆಲ್​ ಮಾಲೀಕ

ಇಲ್ಲಿನ ಮದ್ದೂರು ಪಟ್ಟಣದ ಮೈಸೂರು ಹೆದ್ದಾರಿ ಸಮೀಪದ, ಬೆಳ್ಳಿ ಬಿರಿಯಾನಿ ಪ್ಯಾರೆಡೈಸ್ ಹೋಟೆಲ್​ನಲ್ಲಿ ಈ ಘಟನೆ‌‌‌ ನಡೆದಿದೆ. ಹೋಟೆಲ್​ ಮಾಲೀಕ ಬೆಳ್ಳಿ ಶಂಕರ್ ಟಿವಿ ಒಡೆದು ಹಾಕಿದ್ದಾರೆ. ಇನ್ನು ಮುಂದೆ ಕ್ರಿಕೆಟ್​ ನೋಡುವುದೇ ಇಲ್ಲ. ವಿಶ್ವಕಪ್​ ತುಂಬಾ ನಿರಾಸೆ ತಂದಿದೆ ಎಂದು ಹೇಳಿದ್ದಾರೆ.

ನ್ಯೂಜಿಲ್ಯಾಂಡ್​ ವಿರುದ್ಧ ನಡೆದ ಸೆಮಿಫೈನಲ್​ ಪಂದ್ಯದಲ್ಲಿ ಭಾರತ 18ರನ್​ಗಳ ಸೋಲು ಕಾಣುವ ಮೂಲಕ ವಿಶ್ವಕಪ್​ ಟೂರ್ನಿಯಿಂದ ಹೊರಬಿದ್ದಿದೆ.

For All Latest Updates

TAGGED:

ABOUT THE AUTHOR

...view details