ಕರ್ನಾಟಕ

karnataka

By

Published : Mar 29, 2019, 8:46 PM IST

Updated : Mar 29, 2019, 9:15 PM IST

ETV Bharat / state

ಸಕ್ಕರೆ ನಾಡಿನಲ್ಲಿ ಕಹಳೆ ಊದಲು ಮುಂದಾದ ಸುಮಲತಾ ಅಂಬರೀಶ್​​​​

ಸುಮಲತಾ ನಾಮಪತ್ರ ಸಲ್ಲಿಕೆ ಸಮಯದಲ್ಲಿ ಮೂರು ಚಿಹ್ನೆ ಕೇಳಿಕೊಂಡಿದ್ದರು‌. ಅದರಂತೆಯೇ ಅವರಿಗೆ ವ್ಯಕ್ತಿ ಕಹಳೆ ಊದುತ್ತಿರುವ ಚಿಹ್ನೆಯನ್ನು ನೀಡಲಾಗಿದೆ.

ಸುಮಲತಾ ಅಂಬರೀಶ್​

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ನಿಖಿಲ್​ ಕುಮಾರಸ್ವಾಮಿಗೆ ಎದುರಾಳಿಯಾಗಿ ನಿಂತಿರುವ ನಟಿ, ಸ್ವತಂತ್ರ ಅಭ್ಯರ್ಥಿ ಸುಮಲತಾಗೆ ಕೊನೆಗೂ ಬಯಸಿದ ಚಿಹ್ನೆ ಸಿಕ್ಕಿದೆ.

ಸುಮಲತಾ ನಾಮಪತ್ರ ಸಲ್ಲಿಕೆ ಸಮಯದಲ್ಲಿ ಮೂರು ಚಿಹ್ನೆಯನ್ನು ಕೇಳಿಕೊಂಡಿದ್ದರು‌. ಕಬ್ಬಿನ ಜೊಲ್ಲೆ ಮುಂದಿರುವ ರೈತ, ನಾಲ್ಕು ತೆಂಗಿನ ಮರದ ಚಿಹ್ನೆ ಹಾಗೂ ಕಹಳೆ ಊದುತ್ತಿರುವ ವ್ಯಕ್ತಿಯ ಚಿಹ್ನೆಯನ್ನು ಕೇಳಿಕೊಂಡಿದ್ದರು.

ಅದರಂತೆಯೇ ಎರಡನೇ ಬಾರಿಯ ಪರಿಶೀಲನೆ ವೇಳೆ ವ್ಯಕ್ತಿ ಕಹಳೆ ಊದುತ್ತಿರುವ ಚಿಹ್ನೆಯನ್ನು ನೀಡಲಾಗಿದೆ ಎಂದು ತಿಳಿದು ಬಂದಿದೆ.

Last Updated : Mar 29, 2019, 9:15 PM IST

For All Latest Updates

TAGGED:

ABOUT THE AUTHOR

...view details