ಕರ್ನಾಟಕ

karnataka

ಮೀನು ಹಿಡಿಯಲು ಹೋಗಿ ಮೂವರು ವಿದ್ಯಾರ್ಥಿಗಳು ನೀರುಪಾಲು

ನದಿಯಲ್ಲಿ ಮೀನು ಹಿಡಿಯಲು ಹೋಗಿ ಮೂವರು ವಿದ್ಯಾರ್ಥಿಗಳು ನೀರುಪಾಲದ ಘಟನೆ ಶ್ರೀ ರಂಗಪಟ್ಟಣದ ರೈಲ್ವೆ ಸೇತುವೆ ಬಳಿ ನಡೆದಿದೆ.

By

Published : Feb 14, 2020, 2:47 PM IST

Published : Feb 14, 2020, 2:47 PM IST

Updated : Feb 14, 2020, 3:32 PM IST

three-students-died-in-kaveri-river
ಮೂವರು ವಿದ್ಯಾರ್ಥಿಗಳು ನೀರುಪಾಲು

ಮಂಡ್ಯ: ಕಾವೇರಿ ನದಿಯಲ್ಲಿ ಮೀನು ಹಿಡಿಯಲು ಹೋಗಿ ಮೂವರು ವಿದ್ಯಾರ್ಥಿಗಳು ನೀರುಪಾಲದ ಘಟನೆ ಶ್ರೀ ರಂಗಪಟ್ಟಣದ ರೈಲ್ವೆ ಸೇತುವೆ ಬಳಿ ನಡೆದಿದೆ.

ಹಾಸನ ಜಿಲ್ಲೆ ಅರಸೀಕೆರೆ ಮೂಲದ ಮುಜಾಸಿಮ್ (17), ತೌಸೀಫ್ (18), ಇಫ್ತಿಕಾರ್(18) ಮೃತಪಟ್ಟ ಯುವಕರಾಗಿದ್ದು, ಮೈಸೂರಿನ ಮದರಸಾದಲ್ಲಿ ವ್ಯಾಸಂಗ ಮಾಡುತ್ತಿದ್ದರು ಎನ್ನಲಾಗಿದೆ. ರಜೆ ಹಿನ್ನೆಲೆ ಇಂದು ಕಾವೇರಿ ನದಿಯಲ್ಲಿ ಮೀನು ಹಿಡಿಯಲು ಮೂವರು ಬಂದಿದ್ದರು. ಆದರೆ, ಇವರಲ್ಲಿ ಓರ್ವ ಕಾಲು ಜಾರಿ ಬಿದ್ದ ಹಿನ್ನೆಲೆ ಆತನನ್ನು ಕಾಪಾಡಲು ಹೋಗಿ ಇನ್ನಿಬ್ಬರು ಕಾವೇರಿ ನದಿಯಲ್ಲಿ ಮುಳುಗಿದ್ದಾರೆ ಎನ್ನಲಾಗಿದೆ.

ಮೂವರು ವಿದ್ಯಾರ್ಥಿಗಳು ನೀರುಪಾಲು

ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಆಗಮಿಸಿ ಶವ ಹುಡುಕಾಟ ನಡೆಸ್ತಾ ಇದ್ದು, ಓರ್ವನ ಶವ ಪತ್ತೆಯಾಗಿದೆ. ಮತ್ತಿಬ್ಬರ ಶವಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ. ಈ ಸಂಬಂಧ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Feb 14, 2020, 3:32 PM IST

ABOUT THE AUTHOR

...view details