ಕರ್ನಾಟಕ

karnataka

By

Published : Jul 24, 2019, 10:49 AM IST

ETV Bharat / state

ಕೆಆರ್​ಎಸ್​​​ನಿಂದ ನಾಲೆಗೆ ನೀರು ಹರಿಸಿದ್ದು ಕೇಂದ್ರ:  ಸುಮಲತಾ ಸ್ಪಷ್ಟನೆ

ಕೆಆರ್​ಎಸ್​ ನಿಂದ ನಾಲೆಗೆ ನೀರು ಬಿಡುವ ವಿಚಾರವಾಗಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಸಲ್ಲಿಸಿದ್ದ ಮನವಿಗೆ ಕೇಂದ್ರ ಸರ್ಕಾರ ಒಪ್ಪಿ, ನಾಲೆಗಳಿಗೆ ನೀರು ಬಿಟ್ಟಿದ್ದಕ್ಕೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್‌ಗೆ ಅಭಿನಂದನೆ ಸಲ್ಲಿಸಿ ಸಚಿವರು ನೀಡಿರುವ ಉತ್ತರದ ಪ್ರತಿಯನ್ನು ಫೇಸ್​ಬುಕ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

ಸುಮಲತಾ

ಮಂಡ್ಯ: ಕೆಆರ್​​ಎಸ್​​​​ನಿಂದ ನಾಲೆಗೆ ನೀರು ಹರಿಸಿದ್ದು, ರಾಜ್ಯ ಸರ್ಕಾರವೇ, ಕೇಂದ್ರ ಸರ್ಕಾರವಾ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಸಂಸದೆ ಸುಮಲತಾ ಅಂಬರೀಶ್ ಈ ಅನುಮಾನಕ್ಕೆ ಉತ್ತರ ನೀಡಿದ್ದಾರೆ.

ಪೋಸ್ಟ್​ ಮಾಡಿದ ಚಿತ್ರಗಳು

ಸಂಸದೆ ಸುಮಲತಾ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೆ ಸಚಿವರು ನೀಡಿರುವ ಉತ್ತರದ ಪ್ರತಿಯನ್ನು ಪೋಸ್ಟ್ ಮಾಡಿ ನಾಲೆಗೆ ನೀರು ಹರಿಸಿದ್ದು ರಾಜ್ಯ ಸರ್ಕಾರವಲ್ಲ, ಕೇಂದ್ರ ಸರ್ಕಾರ ಎಂದು ಪರೋಕ್ಷವಾಗಿ ಹೇಳಿದ್ದಾರೆ.

ತಮ್ಮ ಮನವಿಗೆ ಸ್ಪಂದಿಸಿ ನಾಲೆಗಳಿಗೆ ನೀರು ಬಿಡಿಸಿದ ಕೇಂದ್ರ ಸಚಿವರಿಗೆ ಅಭಿನಂದನೆ ಸಲ್ಲಿಸಿ ಪೋಸ್ಟ್ ಮಾಡಿದ್ದು, ಸದ್ಯ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಈಗ ಸಖತ್ ವೈರಲ್ ಆಗಿದೆ.

For All Latest Updates

TAGGED:

ABOUT THE AUTHOR

...view details