ಕರ್ನಾಟಕ

karnataka

By

Published : May 25, 2021, 11:14 AM IST

ETV Bharat / state

ಸ್ವಾಭಿಮಾನ ಅಂದ್ರೆ ಏನು ಅನ್ನೋದನ್ನು ಮಂಡ್ಯ ಜನತೆ ತೋರಿಸಿಕೊಟ್ಟು 2 ವರ್ಷವಾಯ್ತು: ಸುಮಲತಾ ಅಂಬರೀಶ್

ಸ್ವಾಭಿಮಾನ ಎಂದರೆ ಏನು ಅನ್ನುವುದನ್ನು ಮಂಡ್ಯ ಜನತೆ ಇಡೀ ಜಗತ್ತಿಗೆ ತೋರಿಸಿಕೊಟ್ಟು ಎರಡು ವರ್ಷವಾಯಿತು. ಮಂಡ್ಯ ಲೋಕಸಭೆ ಸಂಸದೆಯಾಗಿ ಆಯ್ಕೆ ಮಾಡಿ, ನಿಮ್ಮ ಸೇವೆಗೆ ಅವಕಾಶ ಮಾಡಿಕೊಟ್ಟ ಮಂಡ್ಯದ ಸ್ವಾಭಿಮಾನಿ ಮತದಾರರಿಗೆ ಮತ್ತು ಸರ್ವರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಸುಮಲತಾ ಅಂಬರೀಷ್ ಫೇಸ್‌ಬುಕ್​ನಲ್ಲಿ ಬರೆದುಕೊಂಡಿದ್ದಾರೆ.

Mandya
ಸಂಸದೆ ಸುಮಲತಾ ಅಂಬರೀಷ್

ಮಂಡ್ಯ:ಪಕ್ಷೇತರ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಸುಮಲತಾ ಅಂಬರೀಷ್, ಸಂಸದೆಯಾಗಿ ಮೇ 23ಕ್ಕೆ ಎರಡು ವರ್ಷ ಪೂರೈಸಿದ್ದಾರೆ. ಹೀಗಾಗಿ, ತಮ್ಮ ಗೆಲುವಿನ ಕ್ಷಣವನ್ನು ನೆನೆದು ಫೇಸ್‌ಬುಕ್​ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಸುಮಲತಾ ಅಂಬರೀಷ್ ಫೇಸ್‌ಬುಕ್ ಪೋಸ್ಟ್‌

ಸ್ವಾಭಿಮಾನ ಎಂದರೆ ಏನು ಅನ್ನುವುದನ್ನು ಮಂಡ್ಯ ಜನತೆ ಇಡೀ ಜನತ್ತಿಗೆ ತೋರಿಸಿಕೊಟ್ಟು ಎರಡು ವರ್ಷವಾಯಿತು. ಮಂಡ್ಯ ಲೋಕಸಭೆ ಸಂಸದೆಯಾಗಿ ಆಯ್ಕೆ ಮಾಡಿ, ನಿಮ್ಮ ಸೇವೆಗೆ ಅವಕಾಶ ಮಾಡಿಕೊಟ್ಟ ಮಂಡ್ಯದ ಸ್ವಾಭಿಮಾನಿ ಮತದಾರರಿಗೆ ಮತ್ತು ಸರ್ವರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಕ್ಷೇತ್ರದ ಜನರಿಗಾಗಿ ಈವರೆಗೂ ನಾನು ಮಾಡಿದ ಕೆಲಸಗಳಿಗೆ ಪ್ರೋತ್ಸಾಹಿಸಿದ, ಮುಂದಿನ ಕನಸುಗಳಿವೆ ಮಾರ್ಗದರ್ಶ ಮಾಡುತ್ತಿರುವ ಹಿರಿಯರಿಗೆ, ಅಧಿಕಾರಿ ವರ್ಗಕ್ಕೆ, ಅಭಿಮಾನಿಗಳಿಗೆ ಮತ್ತು ಮಾಧ್ಯಮದ ಮಿತ್ರರಿಗೆ ಧನ್ಯವಾದಗಳು.

ನಿಮಗೆ ಸೇವೆ ಮಾಡುವ ಅವಕಾಶ ಸದಾ ಸಿಗಲೆಂದು ಪ್ರಾರ್ಥಿಸುವೆ. ದಯವಿಟ್ಟು ಮನೆಯಲ್ಲೇ ಇರಿ, ಕೋವಿಡ್ ನಿಯಮವನ್ನು ತಪ್ಪದೇ ಪಾಲಿಸಿ. ಆರೋಗ್ಯ ಕಾಪಾಡಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ:ಆಸ್ಪತ್ರೆಯ ಯಡವಟ್ಟು, ಗ್ರಾಮಸ್ಥರ ಅಮಾನವೀಯತೆ: ಊರ ಹೊರಗೆ ಶವವಿಟ್ಟು ಕುಟುಂಬ ಕಣ್ಣೀರು

ABOUT THE AUTHOR

...view details