ಕರ್ನಾಟಕ

karnataka

ETV Bharat / state

ಮಂಡ್ಯ ಲಸಿಕಾಭಿಯಾನದಲ್ಲಿ ಆಗುತ್ತಿಲ್ಲ ಕೋವಿಡ್‌ ನಿಯಮ ಪಾಲನೆ: ಹೇಳೋರು, ಕೇಳೋರಿಲ್ಲವೇ? - mandya latest news

ಲಸಿಕಾ ಸ್ಥಳ ಕುಂತಿಬೆಟ್ಟದಲ್ಲಿ ಕೋವಿಡ್​ ನಿಯಮಗಳನ್ನು ಗಾಳಿಗೆ ತೂರಲಾಗಿತ್ತು. ಲಸಿಕೆ ಹಾಕಿಸಿಕೊಳ್ಳಲು ಬಂದ ಅತಿ ಹೆಚ್ಚಿನ ಜನರು ಮಾಸ್ಕ್​ ಧರಿಸಿರಲಿಲ್ಲ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಕೊರೊನಾ ನಿಯಮ ಉಲ್ಲಂಘನೆ ಮಾಡಿದ್ದಾರೆ.

rules violation in Covid Vaccination Center
ಲಸಿಕಾಭಿಯಾನದಲ್ಲಿ ನಿಯಮ ಉಲ್ಲಂಘನೆ!

By

Published : Jun 15, 2021, 10:40 AM IST

ಮಂಡ್ಯ: ಕೊರೊನಾ ಲಸಿಕಾಭಿಯಾನದಲ್ಲಿ ಕೆಲ ಅಧಿಕಾರಿಗಳು ಸೇರಿದಂತೆ ಸಾರ್ವಜನಿಕರು ಕೊರೊನಾ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿರುವ ಘಟನೆ ಜಿಲ್ಲೆಯ ಪಾಂಡವಪುರ ತಾಲೂಕಿನ ಕುಂತಿ ಬೆಟ್ಟದಲ್ಲಿ ನಡೆದಿದೆ‌. ಪಾಂಡವಪುರ ತಾಲೂಕು ಆಡಳಿತದಿಂದ ದೇವೇಗೌಡನಕೊಪ್ಪಲು, ಚಿಕ್ಕಾಡೆ ಹಾಗೂ ಪಟ್ಟಸೋಮನಹಳ್ಳಿ ಗ್ರಾ‌ಮ ಪಂಚಾಯತ್​ ವ್ಯಾಪ್ತಿಯ ಜನರಿಗೆ ಕೊರೊನಾ ಲಸಿಕಾ ಅಭಿಯಾನ ಆಯೋಜನೆ ಮಾಡಿತ್ತು.

ಈ ವೇಳೆ ಜನರು ಒಮ್ಮೆಲೆ ಆಗಮಿಸಿದ್ದರಲ್ಲದೇ, ಮಾಸ್ಕ್ ನಿಯಮ ಮರೆತು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಕೊರೊನಾ ನಿಯಮ ಉಲ್ಲಂಘನೆ ಮಾಡಿದ್ದಾರೆ. ಲಸಿಕೆ ಪಡೆಯಲು ಲಸಿಕಾ ಸ್ಥಳ ಕುಂತಿಬೆಟ್ಟಕ್ಕೆ ಆಗಮಿಸಿದ ಅಪಾರ ಸಂಖ್ಯೆಯ ಜನರ ನಡುವೆ ನೂಕುನುಗ್ಗಲು ಉಂಟಾಗಿತ್ತು. ಪರಸ್ಪರ ಸಾಮಾಜಿಕ ಅಂತರವೆನ್ನುವುದು ಇಲ್ಲಿ ಸಂಪೂರ್ಣ ಮಾಯವಾಗಿತ್ತು.

ಲಸಿಕಾಭಿಯಾನದಲ್ಲಿ ನಿಯಮ ಉಲ್ಲಂಘನೆ!

ಈ ವೇಳೆ ಸ್ಥಳದಲ್ಲಿದ್ದ ಇಒ, ತಾಲೂಕು ಆಡಳಿತ ಸೇರಿದಂತೆ ಯಾವ ಅಧಿಕಾರಿ ವರ್ಗವೂ ಕೂಡ ಕೋವಿಡ್ ನಿಯಾಮಾವಳಿಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಮುಂದಾಗಲಿಲ್ಲ ಎನ್ನುವ ದೂರು ಕೇಳಿಬಂತು.

ಇದನ್ನೂ ಓದಿ:ಬೆಂಗಳೂರಲ್ಲಿ ಹೊಸದಾಗಿ 1,297 ಕೇಸ್ ಪತ್ತೆ: ಪಾಸಿಟಿವಿಟಿ ದರ ಶೇ. 3ಕ್ಕೆ ಇಳಿಕೆ

ABOUT THE AUTHOR

...view details