ಕರ್ನಾಟಕ

karnataka

ETV Bharat / state

ಕೊನೆಗೂ ಕೆಆರ್​ಎಸ್​​ನಿಂದ ನಾಲೆಗಳಿಗೆ ಹರಿದ ನೀರು: ಖುಷಿಗೊಂಡ ರೈತರು

ನೀರಿನ ಸಂಗ್ರಹ ಕಡಿಮೆ ಹಿನ್ನೆಲೆಯಲ್ಲಿ ಹಾಲಿ ಬೆಳೆದಿರುವ ಬೆಳೆ ರಕ್ಷಣೆ, ಜನ-ಜಾನುವಾರುಗಳ ಕುಡಿಯುವ ಉದ್ದೇಶಕ್ಕಾಗಿ ಮಾತ್ರ ನೀರು ಬಳಸುವಂತೆ ಸೂಚನೆ ನೀಡಲಾಗಿದೆ.

By

Published : Jul 16, 2019, 10:57 AM IST

ಕೆಆರ್​​ಎಸ್ ಅಣೆಕಟ್ಟೆಯಿಂದ ನಾಲೆಗಳಿಗೆ ನೀರು ಬಿಡುಗಡೆ

ಮಂಡ್ಯ:ರೈತರ ನಿರಂತರ ಪ್ರತಿಭಟನೆಯ ನಂತರ ಕೊನೆಗೂ ಕೆಆರ್​​ಎಸ್ ಅಣೆಕಟ್ಟೆಯಿಂದ ನಾಲೆಗಳಿಗೆ ನೀರು ಬಿಡುಗಡೆ ಮಾಡಲಾಗಿದ್ದು, ರೈತರು ಹರ್ಷಗೊಂಡಿದ್ದಾರೆ.

ನಿನ್ನೆಯಷ್ಟೆ ರಾಜ್ಯ ಸರ್ಕಾರ ನೀರು ಬಿಡುವ ತೀರ್ಮಾನ ಪ್ರಕಟ ಮಾಡಿದ್ದು, ಅದರಂತೆ ಇಂದು ಅಣೆಕಟ್ಟೆಯಿಂದ ತಡರಾತ್ರಿಯಿಂದಲೇ ನೀರು ಬಿಡುಗಡೆ ಮಾಡಲಾಗಿದೆ. ಕೆಆರ್​​ಎಸ್ ಅಚ್ಚುಕಟ್ಟು ವ್ಯಾಪ್ತಿಯ ನಾಲೆಗಳಿಗೆ ಸುಮಾರು 2,500 ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ. ನಿನ್ನೆ ನಡೆದ ಐಸಿಸಿ ಸಭೆ ನಿರ್ಧಾರದಂತೆ ನೀರು ಬಿಡುಗಡೆ ಮಾಡಲಾಗಿದೆ.

ಕೆಆರ್​​ಎಸ್ ಅಣೆಕಟ್ಟೆಯಿಂದ ನಾಲೆಗಳಿಗೆ ನೀರು ಬಿಡುಗಡೆ

ಕಳೆದೊಂದು ತಿಂಗಳಿಂದ ನಿರಂತರವಾಗಿ ರೈತರು ಹೋರಾಟ ನಡೆಸುತ್ತಿದ್ದರು. ಬೆಳೆ ರಕ್ಷಣೆ, ಜನ-ಜಾನುವಾರುಗಳ ಕುಡಿಯುವ ಉದ್ದೇಶಕ್ಕಾಗಿ ನೀರು ಹರಿಸುವಂತೆ ಹೋರಾಟಗಾರರು ಮನವಿ ಮಾಡಿದ್ದರು. ಮಳೆ ಕೊರತೆ, ನೀರಿನ ಸಂಗ್ರಹ ಕಡಿಮೆ ಹಿನ್ನೆಲೆಯಲ್ಲಿ ಹಾಲಿ ಬೆಳೆದಿರುವ ಬೆಳೆ ರಕ್ಷಣೆ, ಜನ-ಜಾನುವಾರುಗಳ ಕುಡಿಯುವ ಉದ್ದೇಶಕ್ಕಾಗಿ ಮಾತ್ರ ನೀರು ಬಳಸುವಂತೆ ಸೂಚನೆ ನೀಡಲಾಗಿದೆ.

ಹೊಸದಾಗಿ ಯಾವ ಬೆಳೆಯನ್ನೂ ಬೆಳೆಯದಂತೆ ತಾಕೀತು ಮಾಡಲಾಗಿದ್ದು, ಒಂದೊಮ್ಮೆ ಬೆಳೆ ಬೆಳೆದು ನಷ್ಟ ಅನುಭವಿಸಿದರೆ ಸರ್ಕಾರ ಹೊಣೆ ಅಲ್ಲ ಎಂದು ಹೇಳಿದೆ.

ABOUT THE AUTHOR

...view details