ಕರ್ನಾಟಕ

karnataka

ಕೆಆರ್‌ಎಸ್ ಹಿನ್ನೀರಿನಲ್ಲಿ ನಿಯಮ ಮೀರಿ ರಾತ್ರಿ ಪಾರ್ಟಿ: ಆಯೋಜಕರ ಮೇಲೆ ಪ್ರಕರಣ

By

Published : Jun 11, 2020, 11:35 AM IST

ಉದ್ಯಮಿ ಸಂಜಯ್ ಎಂಬುವವರ ತೋಟದಲ್ಲಿ ಸಂತೋಷಕೂಟ ಆಯೋಜಿಸಲಾಗಿದ್ದು, ಈ ವೇಳೆ ಜೋರಾಗಿ ಡಿಜೆ ಹಾಕಿದ್ದರಿಂದ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

Rave Party at KRS
ರೇವ್ ಪಾರ್ಟಿ

ಮಂಡ್ಯ:ಕೆಆರ್‌ಎಸ್ ಹಿನ್ನೀರಿನ ಖಾಸಗಿ ಜಮೀನಿನಲ್ಲಿ ನಿಯಮಮೀರಿ ಸಂತೋಷ ಕೂಟ ಆಯೋಜಿಸಿದ್ದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು 34 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಕೆಆರ್‌ಎಸ್ ಹಿನ್ನೀರಿನಲ್ಲಿ ಪಾರ್ಟಿ

ಮೈಸೂರಿನ ಉದ್ಯಮಿ ಸಂಜಯ್ ಎಂಬುವವರ ತೋಟದಲ್ಲಿ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಈ ವೇಳೆ ಜೋರಾಗಿ ಡಿಜೆ ಸಂಗೀತ ಹಾಕಿದ್ದರಿಂದ ಸಾರ್ವಜನಿಕರಿಗೆ ಕಿರಿಕಿರಿಯಾಗಿದೆ. ಈ ಬಗ್ಗೆ ಸ್ಥಳೀಯರು ಪ್ರಶ್ನಿಸಿದಾಗ ಆಯೋಜಕರು ಧಮ್ಕಿ ಹಾಕಿದ್ದಾರೆ ಎನ್ನಲಾಗಿದೆ. ಹಾಗಾಗಿ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ.

ಭಾರತೀಯ ದಂಡ ಸಂಹಿತೆ ಸೆಕ್ಷನ್ 268, 271, 290, 92(ಐ) ಅಡಿ ಪ್ರಕರಣ ದಾಖಲಾಗಿದ್ದು, ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಎಲ್ಲರನ್ನೂ ಪೊಲೀಸರು ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ABOUT THE AUTHOR

...view details