ಮಂಡ್ಯ : ಮಂಡ್ಯ ಜಿಲ್ಲಾ ಪಂಚಾಯತ್ ವತಿಯಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹಲವು ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಾಣ ಮಾಡ್ಲಾಗಿದೆ. ಆದರೆ, ಸಮರ್ಪಕ ನಿರ್ವಹಣೆ ಇಲ್ಲದೆ ಹಲವು ಕಡೆ ನೀರು ಶುದ್ದೀಕರಣ ಘಟಕಗಳು ಸ್ಥಾಪನೆಯಾದ ಕೆಲವೇ ತಿಂಗಳಲ್ಲಿ ದುರಸ್ತಿಗೆ ಬಂದು ಗ್ರಾಮಸ್ಥರು ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ.
ಶುದ್ಧವೇ ಇರದ ಶುದ್ಧ ಕುಡಿಯುವ ನೀರಿನ ಘಟಕ.. ಕೆಟ್ಟಿದ್ರೂ ರಿಪೇರಿ ಮಾಡದ ಅಧಿಕಾರಿಗಳು - kannada news
ಮಂಡ್ಯ ತಾಲೂಕಿನ ಬೇವುಕಲ್ಲು ಕೊಪ್ಪಲು ಗ್ರಾಮದಲ್ಲಿ ಕುಡಿಯುವ ನೀರು ಶುದ್ಧೀಕರಣ ಘಟಕ ಆರಂಭ ಮಾಡಿ ಆರು ವರ್ಷ ಕಳೆದಿದೆಯಂತೆ. ಈ ಘಟಕ ಪ್ರಾರಂಭದ ಆರು ತಿಂಗಳು ಸರಿಯಾಗಿ ಕಾರ್ಯ ನಿರ್ವಹಿಸಿತ್ತು. ಆದರೆ, ನಂತರ ದುರಸ್ತಿಗೆ ಬಂದದ್ದನ್ನು ಅಧಿಕಾರಿಗಳು ರಿಪೇರಿ ಮಾಡಿಸಲು ಮುಂದಾಗಿಲ್ಲ. ಇದರಿಂದ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಸಮಸ್ಯೆ ಎದುರಿಸುತ್ತಿದ್ದಾರೆ.

ಇದು ಹೆಸರಿಗೆ ಮಾತ್ರ ಶುದ್ದೀಕರಣ ಘಟಕ..ಇಲ್ಲಿರೋದು ಅಶುದ್ದ
ಮಂಡ್ಯ ತಾಲೂಕಿನ ಬೇವುಕಲ್ಲು ಕೊಪ್ಪಲು ಗ್ರಾಮದಲ್ಲಿ ಕುಡಿಯುವ ನೀರು ಶುದ್ಧೀಕರಣ ಘಟಕ ಆರಂಭ ಮಾಡಿ ಆರು ವರ್ಷ ಕಳೆದಿದೆಯಂತೆ. ಈ ಘಟಕ ಪ್ರಾರಂಭದ ಆರು ತಿಂಗಳು ಸರಿಯಾಗಿ ಕಾರ್ಯ ನಿರ್ವಹಿಸಿತ್ತು. ಆದರೆ, ನಂತರ ದುರಸ್ತಿಗೆ ಬಂದದ್ದನ್ನು ಅಧಿಕಾರಿಗಳು ರಿಪೇರಿ ಮಾಡಿಸಲು ಮುಂದಾಗಿಲ್ಲ. ಇದರಿಂದ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಸಮಸ್ಯೆ ಎದುರಿಸುತ್ತಿದ್ದಾರೆ.
ಇದು ಹೆಸರಿಗೆ ಮಾತ್ರ ಶುದ್ದೀಕರಣ ಘಟಕ..ಇಲ್ಲಿರೋದು ಅಶುದ್ದ
ಶುದ್ಧೀಕರಣ ಘಟಕ ಕೊಳಕಿನ ಮೂಲವಾಗಿದೆ. ಯಂತ್ರಗಳು ಕೆಟ್ಟು ಗಬ್ಬುನಾರುತ್ತಿವೆ. ಶುದ್ಧ ನೀರಿನ ಮೂಲವಾದ ಈ ಘಟಕ ಈಗ ಅನೈರ್ಮಲ್ಯದ ತಾಣವಾಗಿದೆ. ಇನ್ನಾದರೂ ಅಧಿಕಾರಿಗಳು ಶುದ್ಧೀಕರಣ ಘಟಕದ ದುರಸ್ಥಿಗೆ ಮುಂದಾಗಬೇಕೆಂದು ಜನರು ಆಗ್ರಹಿಸಿದ್ದಾರೆ.
Last Updated : Jun 9, 2019, 11:59 AM IST