ಕರ್ನಾಟಕ

karnataka

ETV Bharat / state

ಮಂಡ್ಯ; ದ್ವಿಚಕ್ರ ವಾಹನಗಳಿಗೆ ಸಿಗೊಲ್ಲಾ ಪೆಟ್ರೋಲ್... ಹೊರಗೆ ಬಂದ್ರೆ ಗಾಡಿ ಸೀಜ್​ - Mandya latest news

ಲಾಕ್​ಡೌನ್​ ನಡುವೆಯೂ ಮಂಡ್ಯದಲ್ಲಿ ದ್ವಿಚಕ್ರ ವಾಹನಗಳ ಸಂಚಾರ ಹೆಚ್ಚಾಗಿದ್ದು, ಅದಕ್ಕೆ ಕಡಿವಾಣ ಹಾಕಲು ಜಿಲ್ಲೆಯ ಎಲ್ಲಾ ಪೆಟ್ರೋಲ್​ ಬಂಕ್​ಗಳಲ್ಲಿ ಅಗತ್ಯ ವಾಹನಗಳಿಗೆ ಬಿಟ್ಟು ಬೇರೆ ಯಾವುದೇ ವಾಹನಗಳಿಗೂ ಪೆಟ್ರೋಲ್​ ಹಾಕದಂತೆ ಜಿಲ್ಲಾಡಳಿತ ಸೂಚಿಸಿದೆ.

Mandya SP
ಪರಶುರಾಮ್

By

Published : Mar 31, 2020, 8:22 AM IST

ಮಂಡ್ಯ: ಕೋವಿಡ್ 19 ನಿಯಂತ್ರಣಕ್ಕೆ ಕರ್ಪ್ಯೂ ಏರಿದ್ದರೂ ದ್ವಿಚಕ್ರ ವಾಹನಗಳ ಸಂಚಾರ ಹೆಚ್ಚಾಗಿದ್ದು, ಹೀಗಾಗಿ ಜಿಲ್ಲೆಯ ಎಲ್ಲಾ ಪೆಟ್ರೋಲ್ ಬಂಕ್​ಗಳಲ್ಲಿ ಅಗತ್ಯ ಸೇವಾ ನಿರತರ ದ್ವಿಚಕ್ರ ವಾಹನಗಳಿಗೆ ಮಾತ್ರ ಪೆಟ್ರೋಲ್ ಹಾಕುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಎಸ್​ಪಿ ಪರಶುರಾಮ್

ಈ ಸಂಬಂಧ ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್, ಎಷ್ಟೇ ಮಾಹಿತಿ ನೀಡಿದರೂ ದ್ವಿಚಕ್ರ ವಾಹನ ಸವಾರರ ಸಂಚಾರ ಹೆಚ್ಚಾಗಿದೆ. ಹೀಗಾಗಿ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದರು.

ಈಗಾಗಲೇ ಅವಶ್ಯಕವಾಗಿ ಬೇಕಾಗಿರುವ ತರಕಾರಿ, ಮೀನು ಸೇರಿದಂತೆ ಇನ್ನಿತರೆ ವಸ್ತುಗಳ ಸಾಗಾಟಕ್ಕೆ ಅವಕಾಶ ನೀಡಲಾಗಿದೆ. ಅದಕ್ಕೂ ಮೊದಲು ತಹಶೀಲ್ದಾರ್ ಬಳಿ ಅವಶ್ಯಕ ದಾಖಲೆ ನೀಡಿ ಪಾಸ್ ಪಡೆದಿರಬೇಕು ಎಂದು ಮಾಹಿತಿ ನೀಡಿದ ಎಸ್ಪಿ, ಅನಗತ್ಯವಾಗಿ ಸಂಚರಿಸುತ್ತಿದ್ದ 100ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿರುವುದಾಗಿ ತಿಳಿಸಿದ್ದಾರೆ.

ABOUT THE AUTHOR

...view details