ಕರ್ನಾಟಕ

karnataka

ETV Bharat / state

ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ಬಾಲಕಿಯ ಮನೆಗೆ ನಿಖಿಲ್ ಕುಮಾರಸ್ವಾಮಿ ಭೇಟಿ

ಅತ್ಯಾಚಾರಕ್ಕೊಳಗಾಗಿ ಕೊಲೆಯಾಗಿರುವ ಬಾಲಕಿಯ ಮನೆಗೆ ಇಂದು ನಿಖಿಲ್​ ಕುಮಾರಸ್ವಾಮಿ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

By

Published : Oct 14, 2022, 5:12 PM IST

Updated : Oct 14, 2022, 5:37 PM IST

Mnd_1
ನಿಖಿಲ್​ ಕುಮಾರಸ್ವಾಮಿ

ಮಂಡ್ಯ:ಮಳವಳ್ಳಿ ಪಟ್ಟಣದಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ಬಾಲಕಿಯ ಕುಟುಂಬಕ್ಕೆ ನ್ಯಾಯ ಸಿಗುವವರೆಗೆ ಹೋರಾಟ ಮಾಡುವುದಾಗಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.

ಮಳವಳ್ಳಿ ಪಟ್ಟಣದ ಮೈಸೂರು ರಸ್ತೆಯಲ್ಲಿರುವ ಬಾಲಕಿಯ ನಿವಾಸಕ್ಕೆ ಶುಕ್ರವಾರ ನಿಖಿಲ್​ ಕುಮಾರಸ್ವಾಮಿ ಭೇಟಿ ನೀಡಿ ಬಾಲಕಿಯ ಕುಟುಂಬದವರಿಗೆ ಸಾಂತ್ವನ ಹೇಳಿದರು. ಬಳಿಕ ಮಾತನಾಡಿ, ಈ ಕೃತ್ಯ ಇಡೀ ದೇಶ, ರಾಜ್ಯವೇ ತಲೆತಗ್ಗಿಸುವ ವಿಚಾರವಾಗಿದೆ. ಕೃತ್ಯ ಮಾಡಿದವನಿಗೆ ಗಲ್ಲಿಗೆ ಏರಿಸಬೇಕು ನಾವು ಪೋಷಕರ ಜೊತೆ ಇರುತ್ತೇವೆ. ಇದಕ್ಕಾಗಿ ಪಕ್ಷಾತೀತವಾಗಿ ಹೋರಾಟ ಮಾಡಬೇಕು, ಇಲ್ಲಿ ರಾಜಕೀಯ ಬೇಡ. ಇವತ್ತು ಜೈಲಿಗೆ ಹೋಗ್ತಾನೆ, 5-6 ವರ್ಷ ಇರ್ತಾನೆ. ಒಳ್ಳೆ ಊಟ, ತಿಂಡಿ ಹಾಕ್ತಾರೆ ಮತ್ತೆ ಬರ್ತಾನೆ ಹಾಗೇ ಆಗುವುದು ಬೇಡ ಉಗ್ರವಾದ ಶಿಕ್ಷೆ ವಿಧಿಸಬೇಕೆಂದು ಹೇಳಿದರು.

ನಿಖಿಲ್​ ಕುಮಾರಸ್ವಾಮಿ ಪ್ರತಿಕ್ರಿಯೆ

ಇನ್ನು ನೊಂದವರನ್ನು ಭೇಟಿಯಾಗಿ ಸಾಂತ್ವನ ಹೇಳಲು ಜನಪ್ರತಿನಿಧಿಗಳಿಗೆ ಜವಾಬ್ದಾರಿ ಇರಬೇಕು, ಕೇವಲ ಅಧಿಕಾರಕ್ಕಾಗಿ ಬರಬಾರದು ಎಂದು ಸಂಸದೆ ಸುಮಲತಾ ಹೆಸರು ಬಳಸದೇ ನಿಖಿಲ್ ಕುಮಾರಸ್ವಾಮಿ ಟೀಕಿಸಿದರು. ಎಂಪಿ, ಎಂಎಲ್‌, ಮಿನಿಸ್ಟರ್​​ ಎಂದು ಇರಬಾರದು, ಅದು ರಾಜಕಾರಣವಲ್ಲ ನೊಂದವರ ಜೊತೆಗೆ ನಾವು ನಿಲ್ಲಬೇಕು, ಅದೇ ಧರ್ಮ. ಅದನ್ನ ಮಾಡಲಿಲ್ಲ ಅಂದರೆ ಹೇಗೆ ಎಂದು ನಿಖಿಲ್​ ಪ್ರಶ್ನೆ ಮಾಡಿದರು.

ಇದನ್ನೂ ಓದಿ:ಮಂಡ್ಯ ಬಾಲಕಿ ಅತ್ಯಾಚಾರ ಕೊಲೆ ಪ್ರಕರಣ: ಕಾಮುಕನಿಗೆ ಕಠಿಣ ಶಿಕ್ಷೆ ಆಗಲೆಂದು ಸಿದ್ದರಾಮಯ್ಯ ಆಗ್ರಹ

Last Updated : Oct 14, 2022, 5:37 PM IST

ABOUT THE AUTHOR

...view details