ಕರ್ನಾಟಕ

karnataka

By

Published : Mar 7, 2020, 7:46 PM IST

ETV Bharat / state

ಜಿಲ್ಲೆಯ ಅಕ್ರಮ ಗಣಿಗಾರಿಕೆ ಹೆಚ್.ಡಿ.ಕೆ ಕುಟುಂಬಕ್ಕೆ ಸಂಬಂಧಿಸಿದ್ದು: ಸಚಿವ ನಾರಾಯಣ ಗೌಡ

ಅಕ್ರಮ ಗಣಿಗಾರಿಕೆಗೂ, ನಮಗೂ ಸಂಬಂಧವಿಲ್ಲ. ಅದು ದೇವೇಗೌಡರು, ಕುಮಾರಸ್ವಾಮಿ ಅವರ ಕುಟುಂಬಕ್ಕೆ ಸಂಬಂಧಿಸಿದ್ದು ಎಂದು ಸಚಿವ ನಾರಾಯಣ ಗೌಡ ಆರೋಪಿಸಿದ್ದಾರೆ.

narayanagouda-statement-on-illegal-mining
ಸಚಿವ ನಾರಾಯಣಗೌಡ

ಮಂಡ್ಯ:ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗೂ, ನಮಗೂ ಸಂಬಂಧವಿಲ್ಲ. ಅದು ದೇವೇಗೌಡರು, ಕುಮಾರಸ್ವಾಮಿ ಅವರ ಕುಟುಂಬಕ್ಕೆ ಸಂಬಂಧಿಸಿದ್ದು ಎಂದು ಸಚಿವ ನಾರಾಯಣ ಗೌಡ ಜೆಡಿಎಸ್ ವರಿಷ್ಠರ ಹೋರಾಟಕ್ಕೆ ಟಾಂಗ್ ನೀಡಿದರು‌.

ಅಕ್ರಮ ಗಣಿಗಾರಿಕೆ ಕುರಿತು ಸಚಿವ ನಾರಾಯಣಗೌಡ ಹೇಳಿಕೆ

ಮಾಧ್ಯಮಗಳ ಜೊತೆ ಮಾತನಾಡಿ, ನಾವು ಯಾರಿಗಾದರೂ ಬೆರಳು ತೋರಿಸಿ ತೊಂದರೆ ಕೊಟ್ಟಿದ್ದರೆ ತೋರಿಸಲಿ. ಅಕ್ರಮ ಗಣಿಗಾರಿಕೆ ಸ್ಥಳಕ್ಕೆ ತೆರಳಿ ದೇವೇಗೌಡರು ಪ್ರತಿಭಟನೆ ಮಾಡಿದ್ದಾರೆ. ಅವರು ದೊಡ್ಡವರು. ಹೋರಾಟ ಮಾಡಲಿ, ಅದಕ್ಕೂ ನಮಗೂ ಸಂಬಂಧವಿಲ್ಲ. ಚುನಾವಣೆ ವೇಳೆ ತೊಂದರೆ ಕೊಟ್ಟವರೇ ಅವರು. ಬೇಕಿದ್ದರೆ ಕೆ.ಆರ್.ಪೇಟೆ ಮಾತ್ರವಲ್ಲ, ಇಡೀ ಜಿಲ್ಲೆಯಲ್ಲಿ ಪರಿಶೀಲಿಸಿ ಎಂದು ಸವಾಲು ಹಾಕಿದರು‌.

ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಹಂಚಿಕೆ ಶೀಘ್ರದಲ್ಲೇ ಆಗಲಿದೆ. ಈಗ ಅಧಿವೇಶನ ನಡೆಯುತ್ತಿದೆ. ನಮಗೂ ಕೆಲಸ ಹೆಚ್ಚಾಗಿದೆ. ಹೆಚ್ಚು ಪ್ರಶ್ನೆಗಳು ಬರುತ್ತಿದ್ದು, ಅದಕ್ಕೆ ಉತ್ತರಿಸಬೇಕಿದೆ ಎಂದರು.

ABOUT THE AUTHOR

...view details