ಮಂಡ್ಯ: ಬಿಜೆಪಿ ಅಭ್ಯರ್ಥಿ ಮತದಾನ ಮಾಡುವ ಮೊದಲು ದೇವರ ಮೊರೆ ಹೋಗಿದ್ದರು. ತಮ್ಮ ಮನೆಯಲ್ಲಿ ಗಣಪತಿ ಹೋಮ ಮಾಡಿಸಿ ತಮ್ಮ ಗೆಲುವಿಗೆ ಹರಕೆ ಕಟ್ಟಿಕೊಂಡಿದ್ದಾರೆ.
ಗೆಲುವಿಗಾಗಿ ದೇವರ ಮೊರೆ ಹೋದ ನಾರಾಯಣಗೌಡ: ಪೂರ್ಣಾಹುತಿ ನೀಡಿ ವಿಶೇಷ ಪೂಜೆ - karnataka by election news
ರಾತ್ರಿಯಿಡೀ ಮನೆಯಲ್ಲಿ ಹೋಮ-ಹವನ ಮಾಡಿದ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ, ತಮ್ಮ ಗೆಲುವಿಗಾಗಿ ದೇವರ ಮೊರೆ ಹೋಗಿದ್ದಾರೆ.
![ಗೆಲುವಿಗಾಗಿ ದೇವರ ಮೊರೆ ಹೋದ ನಾರಾಯಣಗೌಡ: ಪೂರ್ಣಾಹುತಿ ನೀಡಿ ವಿಶೇಷ ಪೂಜೆ ಗೆಲುವಿಗಾಗಿ ದೇವರ ಮೊರೆ ಹೋದ ನಾರಾಯಣಗೌಡ, Narayana Gowda puja to god before voting at mandya](https://etvbharatimages.akamaized.net/etvbharat/prod-images/768-512-5274543-thumbnail-3x2-nin.jpg)
ಗೆಲುವಿಗಾಗಿ ದೇವರ ಮೊರೆ ಹೋದ ನಾರಾಯಣಗೌಡ
ರಾತ್ರಿಯಿಡೀ ಮನೆಯಲ್ಲಿ ಹೋಮ-ಹವನ ಮಾಡಿದ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ, ತಮ್ಮ ಗೆಲುವಿಗಾಗಿ ದೇವರ ಮೊರೆ ಹೋಗಿದ್ದಾರೆ. ಪತ್ನಿ ಹಾಗೂ ಮಕ್ಕಳ ಜೊತೆ ಪೂರ್ಣಾಹುತಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಗೆಲುವಿಗಾಗಿ ದೇವರ ಮೊರೆ ಹೋದ ನಾರಾಯಣಗೌಡ
ಪೂಜೆ ನಂತರ ದೇವಸ್ಥಾನಕ್ಕೆ ತೆರಳಿದ ದಂಪತಿ, ನಂತರ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಿದರು. ಹಕ್ಕು ಚಲಾಯಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ನಾರಾಯಣಗೌಡ, ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.