ಕರ್ನಾಟಕ

karnataka

ETV Bharat / state

ಊಟ ಹಾಕಿದ ತಾಯಿಯನ್ನೇ ಕಾಮಿಸಿದವರು : ಚೆಲುವರಾಯಸ್ವಾಮಿ ವಿರುದ್ಧ ಶಾಸಕ ಸುರೇಶ್ ಗೌಡ ವ್ಯಂಗ್ಯ - MLA Suresh Gowda outrage against cheluvarayaswamy

ಜೆಡಿಎಸ್​ನಲ್ಲಿ ಎಲ್ಲವನ್ನ ಅನುಭವಿಸಿ ಅವರ ಬಗ್ಗೆ ಮಾತನಾಡ್ತಿರಿ. ದೇವೇಗೌಡರನ್ನ, ಸಮಾಜವನ್ನ ತೇಜೋವಧೆ ಮಾಡಲು ತೆರೆ ಮರೆಯಲ್ಲೇ ಪ್ರಯತ್ನ ಮಾಡುತ್ತಿದ್ದಾರೆ ಎಂದು ಗುಡುಗಿದರಲ್ಲದೇ ಸಿದ್ದರಾಮಯ್ಯ ಅವರು ಇಂಥವರನ್ನ ಯಾಕಾಗಿ ಜೊತೆಯಲ್ಲಿಟ್ಟುಕೊಂಡಿದ್ದಾರೋ ಎಂದು ಪ್ರಶ್ನೆ ಮಾಡಿದರು..

mla-suresh-kumar
ಶಾಸಕ ಸುರೇಶ್ ಗೌಡ

By

Published : Jun 27, 2021, 6:20 PM IST

Updated : Jun 27, 2021, 6:52 PM IST

ಮಂಡ್ಯ :ಮನ್‌ಮುಲ್ ನೀರು ಮಿಶ್ರಿತ ಹಾಲು ಪೂರೈಕೆ ಹಗರಣಕ್ಕೆ ಸಂಬಂಧಿಸಿದಂತೆ ಆಡಿಯೋ ಬಹಿರಂಗ ವಿಚಾರಕ್ಕೆ ಮಾಜಿ ಸಚಿವ ಚೆಲುವರಾಯಸ್ವಾಮಿ ಊಟ ಹಾಕಿದ ತಾಯಿಯನ್ನೇ ಕಾಮಿಸಿದವರು ಎಂದು ಶಾಸಕ ಸುರೇಶ್ ಗೌಡ ವಾಗ್ದಾಳಿ ನಡೆಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಳಿತ ಮಂಡಳಿ ಸೂಪರ್ ಸೀಡ್ ಮಾಡಿಸಿ, ಹಿಡಿತ ಸಾಧಿಸಲು ಯತ್ನ ಮಾಡಿದ್ದಾರೆ. ಇಲ್ಲಸಲ್ಲದ ಆರೋಪ ಮಾಡ್ತಿದ್ದಾರೆ ಎಂದು ಮಾಜಿ ಸಚಿವರ ಮೇಲೆ ಕಿಡಿಕಾರಿದರು.

ಶಾಸಕ ಸುರೇಶ್ ಗೌಡ ಮಾತನಾಡಿದರು

ಜೆಡಿಎಸ್ ಸರ್ಕಾರ ಹೋದ ಮೇಲೆ ಜಿಲ್ಲೆಯಲ್ಲಿ ಕಾಂಗ್ರೆಸ್‌ನವರದ್ದೇ ನಡೆಯುತ್ತಿರೋದು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಎಂ ಯಡಿಯೂರಪ್ಪ ಅವರ ಜೊತೆ ಅಂಡರ್ ಸ್ಟ್ಯಾಂಡ್‌ನಲ್ಲಿದ್ದಾರೆ ಎಂದರಲ್ಲದೇ ಅನ್ನ ಹಾಕೋ ತಾಯಿಯನ್ನೇ ಕಾಮಿಸಿದವರು ಎಂಬ ಗಾದೆ ಮಾತಿದೆ ಎಂದು ವ್ಯಂಗ್ಯವಾಡಿದರು.

ಜೆಡಿಎಸ್​ನಲ್ಲಿ ಎಲ್ಲವನ್ನ ಅನುಭವಿಸಿ ಅವರ ಬಗ್ಗೆ ಮಾತನಾಡ್ತಿರಿ. ದೇವೇಗೌಡರನ್ನ, ಸಮಾಜವನ್ನ ತೇಜೋವಧೆ ಮಾಡಲು ತೆರೆ ಮರೆಯಲ್ಲೇ ಪ್ರಯತ್ನ ಮಾಡುತ್ತಿದ್ದಾರೆ ಎಂದು ಗುಡುಗಿದರಲ್ಲದೇ ಸಿದ್ದರಾಮಯ್ಯ ಅವರು ಇಂಥವರನ್ನ ಯಾಕಾಗಿ ಜೊತೆಯಲ್ಲಿಟ್ಟುಕೊಂಡಿದ್ದಾರೋ ಎಂದು ಪ್ರಶ್ನೆ ಮಾಡಿದರು.

ಬೇಕಾಗಿರೋ ಆಡಳಿತಾಧಿಕಾರಿಯನ್ನ ಹಾಕೊಂಡು ಮನ್‌ಮುಲ್ ಲೂಟಿ ಮಾಡಲು ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಚೆಲುವರಾಯಸ್ವಾಮಿ ವಿರುದ್ದ ನೇರ ಆರೋಪ ಮಾಡಿದರು‌. ಇವತ್ತು ನೀನು ಏನಾಗಿದ್ದರೂ ಅದಕ್ಕೆ ಜೆಡಿಎಸ್ ಪಕ್ಷ ನಾಯಕರು, ಕಾರ್ಯಕರ್ತರಿಂದ ಮಾತ್ರ ಎಂದರಲ್ಲದೇ ದೇವೇಗೌಡರು ತನಿಖೆ ಮಾಡಬೇಡಿ ಎಂದು ಎಲ್ಲಿ ಹೇಳಿದ್ದಾರೆ ಎಂದು ತೋರಿಸಲಿ.

ಅದು ನಿಜವೇ ಆದ್ರೇ ನಾವು ನಮ್ಮ ಪಕ್ಷವನ್ನ ವಿಸರ್ಜಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ದೇವೇಗೌಡರು, ಕುಮಾರಸ್ವಾಮಿ ಬಗ್ಗೆ ಮಾತನಾಡಲು ನಿನಗೆ ಏನ್ ಯೋಗ್ಯತೆ ಇದೆ ಎಂದು ಪ್ರಶ್ನಿಸುವ ಮೂಲಕ ಚೆಲುವರಾಯಸ್ವಾಮಿ ಅವರ ವಿರುದ್ಧ ಶಾಸಕ ಸುರೇಶ್ ಗೌಡ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ಓದಿ:ಪುತ್ತೂರು : ವಿದ್ಯಾರ್ಥಿಗಳ ಪೋಷಕರಿಂದ ಶಾಲಾ ಮೈದಾನದಲ್ಲಿ ಭತ್ತದ ಕೃಷಿ

Last Updated : Jun 27, 2021, 6:52 PM IST

ABOUT THE AUTHOR

...view details