ಕರ್ನಾಟಕ

karnataka

ETV Bharat / state

ಬೈಕ್‌ಗೆ ಶಾಸಕರ ಕಾರು ಡಿಕ್ಕಿ; ಚಿಕಿತ್ಸೆ ಕೊಡಿಸಿ ಶಾಸಕ ರಾಮದಾಸ್ ಮಾನವೀಯತೆ

ಮಂಡ್ಯ ತಾಲೂಕಿನ ಬಿಳಗೂಲಿ ಗ್ರಾಮದ ಶಿವಣ್ಣ ಎಂಬುವರ ಬೈಕ್​​​ಗೆ ಶಾಸಕ ರಾಮದಾಸ್ ಕಾರು ಡಿಕ್ಕಿ ಹೊಡೆದಿದೆ.

By

Published : Sep 6, 2019, 12:07 PM IST

ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದ ಶಾಸಕ ರಾಮ್‌ದಾಸ್

ಮಂಡ್ಯ: ಬೆಂಗಳೂರಿಗೆ ತೆರಳುತ್ತಿದ್ದ ಶಾಸಕ ರಾಮದಾಸ್ ಕಾರು, ಬೈಕ್‌ಗೆ ಡಿಕ್ಕಿ ಹೊಡೆದಿದ್ದು ಸವಾರನಿಗೆ ಸಣ್ಣಪುಟ್ಟ ಗಾಯವಾದ ಘಟನೆ ಮಂಡ್ಯ ಹೊರವಲಯದ ಜ್ಯೋತಿ ಇಂಟರ್‌ನ್ಯಾಶನಲ್ ಹೋಟೆಲ್ ಬಳಿಯ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನಡೆದಿದೆ.

ಮಂಡ್ಯ ತಾಲೂಕಿನ ಬಿಳಗೂಲಿ ಗ್ರಾಮದ ಶಿವಣ್ಣ (50) ಗಾಯಗೊಂಡಿರುವ ಬೈಕ್ ಸವಾರ.

ಬೈಕ್ ಸವಾರ ತಿರುವು ಪಡೆದುಕೊಳ್ಳುವಾಗ ಕಾರು ಡಿಕ್ಕಿ ಹೊಡೆದಿದೆ ಎಂಬ ಮಾಹಿತಿ ಇದೆ.

ಗಾಯಾಳುವನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಕರೆತಂದು ಶಾಸಕ ರಾಮದಾಸ್ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಅವರು ಮತ್ತೊಂದು ಕಾರಿನಲ್ಲಿ ಬೆಂಗಳೂರಿಗೆ ತೆರಳಿದರು. ಮಂಡ್ಯ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details