ಮಂಡ್ಯ: ಮೈಸೂರು ಹಾಗೂ ಶ್ರೀರಂಗಪಟ್ಟಣ ದಸರಾ ಹಿನ್ನೆಲೆ ವಸತಿ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಕೆಆರ್ಎಸ್ನಲ್ಲಿ ಪ್ರವಾಸಿಗರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಅಧಿಕಾರಿಗಳ ಜೊತೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಮುಂಜಾನೆಯೇ ಅಖಾಡಕ್ಕೆ ಇಳಿದು ರಸ್ತೆ ಕಾಮಗಾರಿ, ವಿದ್ಯುತ್ ಪೂರೈಕೆ, ಪ್ರವಾಸಿಗರ ಮೂಲ ಸೌಕರ್ಯ ಕುರಿತು ಮಾಹಿತಿ ಸಂಗ್ರಹ ಮಾಡಿದರು.
ದಸರಾ ಸಿದ್ಧತೆ ಹಿನ್ನೆಲೆ ಕೆಆರ್ಎಸ್ ವೀಕ್ಷಣೆ ಮಾಡಿದ ಸಚಿವ ಸೋಮಣ್ಣ - ಸಚಿವ ವಿ.ಸೋಮಣ್ಣ
ಮೈಸೂರು ಹಾಗೂ ಶ್ರೀರಂಗಪಟ್ಟಣ ದಸರಾ ಹಿನ್ನೆಲೆ ವಸತಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಕೆಆರ್ಎಸ್ನಲ್ಲಿ ಪ್ರವಾಸಿಗರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಅಧಿಕಾರಿಗಳ ಜೊತೆ ಭೇಟಿ ನೀಡಿ ಪರಿಶೀಲನೆ ಮಾಡಿದರು.

ಕೆ.ಆರ್.ಎಸ್ ವೀಕ್ಷಣೆ
ದಸರಾ ಸಿದ್ಧತೆ ಹಿನ್ನಲೆ ಕೆಆರ್ಎಸ್ ವೀಕ್ಷಣೆ ಮಾಡಿದ ಸಚಿವ ಸೋಮಣ್ಣ
ರಸ್ತೆ ಕಾಮಗಾರಿಗಳ ಮಾಹಿತಿ ಪಡೆದ ನಂತರ ಕೆಆರ್ಎಸ್ಗೆ ಭೇಟಿ ನೀಡಿ ಪರಿಶೀಲನೆ ಮಾಡಿ ಜೊತೆಯಲ್ಲೇ ಅಧಿಕಾರಿಗಳ ಸಭೆ ಮಾಡಿದರು. ಈ ವೇಳೆ ಸಿದ್ಧತೆ ಕುರಿತು ಮಾಹಿತಿ ಪಡೆದುಕೊಂಡರು. ಇದಕ್ಕೂ ಮೊದಲು ಕಾವೇರಿ ಮಾತೆಗೆ ಪೂಜೆ ಸಲ್ಲಿಸಿದರು.
ಈ ಬಾರಿ ವಿಶೇಷ ದಸರಾ ಕುರಿತು ಮಾಹಿತಿ ನೀಡಿದ ಸಚಿವರು, ಕೆಆರ್ಎಸ್ ಮಾದರಿಯಲ್ಲೇ ಕಬಿನಿಯನ್ನು ಅಭಿವೃದ್ಧಿ ಪಡಿಸಲಾಗುವುದು ಎಂದರು.