ಕರ್ನಾಟಕ

karnataka

By

Published : Dec 31, 2020, 12:53 PM IST

ETV Bharat / state

ಕೆ.ಆರ್. ಪೇಟೆಯಲ್ಲಿ ಬಿಜೆಪಿಗೆ ನೆಲೆಯಿಲ್ಲ ಅಂದವರಿಗೇ ಈಗ ನೆಲೆಯಿಲ್ಲ: ಸಚಿವ ನಾರಾಯಣಗೌಡ

ಕೆ.ಆರ್. ಪೇಟೆ ತಾಲೂಕಿನಲ್ಲಿ ಬಿಜೆಪಿಗೆ ನೆಲೆಯಿಲ್ಲ ಅಂದವರಿಗೇ ಇದೀಗ ನೆಲೆಯಿಲ್ಲ. ತಾಲೂಕಿನಲ್ಲಿ ಬಿಜೆಪಿ ಮೊದಲ ಬಾರಿಗೆ ಮೊದಲನೇ ಸ್ಥಾನದಲ್ಲಿದೆ. ಇದು ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪನವರ ಆರ್ಶೀವಾದ ಎಂದು ಸಚಿವ ನಾರಾಯಣಗೌಡ ಪ್ರತಿಕ್ರಿಯಿಸಿದ್ದಾರೆ.

minister-narayana-gowda-felicitated-bjp-candidates
ಕೆ.ಆರ್.ಪೇಟೆ ತಾಲೂಕಿನಲ್ಲಿ ಬಿಜೆಪಿಗೆ ನೆಲೆಯಿಲ್ಲ ಅಂದವರಿಗೆ ಇದೀಗ ನೆಲೆಯಿಲ್ಲ: ಸಚಿವ ನಾರಾಯಣಗೌಡ

ಮಂಡ್ಯ:ಕೆ.ಆರ್. ಪೇಟೆ ತಾಲೂಕಿನ ಗ್ರಾಮ​ ಪಂಚಾಯತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಸಚಿವ ನಾರಾಯಣಗೌಡ ತಮ್ಮ ನಿವಾಸದಲ್ಲಿ ಸನ್ಮಾನಿಸಿದರು.

ಕೆ.ಆರ್. ಪೇಟೆ ತಾಲೂಕಿನಲ್ಲಿ ಬಿಜೆಪಿಗೆ ನೆಲೆಯಿಲ್ಲ ಅಂದವರಿಗೆ ಇದೀಗ ನೆಲೆಯಿಲ್ಲ: ಸಚಿವ ನಾರಾಯಣಗೌಡ

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆ.ಆರ್. ಪೇಟೆ ತಾಲೂಕಿನಲ್ಲಿ ಬಿಜೆಪಿಗೆ ನೆಲೆಯಿಲ್ಲ ಅಂದವರಿಗೇ ಇದೀಗ ನೆಲೆಯಿಲ್ಲ. ತಾಲೂಕಿನಲ್ಲಿ ಬಿಜೆಪಿ ಮೊದಲ ಬಾರಿಗೆ ಮೊದಲನೇ ಸ್ಥಾನದಲ್ಲಿದೆ. ಇದು ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪನವರ ಆರ್ಶೀವಾದ ಎಂದರು.

ಕೆ.ಆರ್. ಪೇಟೆ ಜೆಡಿಎಸ್ ಹಾಗೂ ಕಾಂಗ್ರೆಸ್​ನ ಭದ್ರಕೋಟೆಯಾಗಿತ್ತು. ಜೆಡಿಎಸ್​ನವರು ನಮಗೆ ಹೆಚ್ಚು ಪೈಪೋಟಿ ನೀಡಿದ್ದರು. ಆದರೂ ಜನರು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನೇ ಗೆಲ್ಲಿಸಿದ್ದಾರೆ. ಮತದಾರರ ಋಣವನ್ನು ನಮ್ಮೆಲ್ಲ ಅಭ್ಯರ್ಥಿಗಳು ತೀರಿಸುತ್ತಾರೆ ಎಂದು ನುಡಿದರು.

ಸೋತಿರುವ ಅಭ್ಯರ್ಥಿಗಳನ್ನು ಕೂಡ ನಾವು ಕೈಬಿಡುವುದಿಲ್ಲ. ಅವರು ಗೆದ್ದಿದ್ದಾರೆ ಎಂದು ನಾನು ಭಾವಿಸಿದ್ದೇನೆ. ಹೀಗಾಗಿ ಗೆದ್ದಿರುವ ಹಾಗೂ ಸೋತಿರುವ ಅಭ್ಯರ್ಥಿಗಳಿಗೆ ಮುಖ್ಯಮಂತ್ರಿಗಳನ್ನು ಕರೆಸಿ ಸನ್ಮಾನಿಸಲಾಗುವುದು ಎಂದರು.

ABOUT THE AUTHOR

...view details