ಕರ್ನಾಟಕ

karnataka

ETV Bharat / state

ಲಾರಿ ದುರಸ್ತಿ ವೇಳೆ ಜಾಕ್ ಕುಸಿದು ಮೆಕ್ಯಾನಿಕ್ ಸಾವು - ತಾಂತ್ರಿಕ ದೋಷದಿಂದ ಕೆಟ್ಟ ಲಾರಿ

ದುರಸ್ತಿ ಮಾಡುತ್ತಿದ್ದ ಕಬ್ಬಿನ ಲಾರಿಯ ಜಾಕ್ ಕುಸಿದು ಮೆಕ್ಯಾನಿಕ್ ಸಾವಿಗೀಡಾಗಿದ್ದಾರೆ. ಸತತ ಒಂದು ಗಂಟೆಗಳ ಕಾಲ ಕಬ್ಬಿನ ಕಂತೆಗಳನ್ನು ತೆಗೆದು ಶವವನ್ನು ಹೊರ ತೆಗೆಯಲಾಯಿತು.

dead
dead

By

Published : Oct 14, 2020, 7:18 PM IST

ಮಂಡ್ಯ‌:ದುರಸ್ತಿ ಮಾಡುತ್ತಿದ್ದ ಕಬ್ಬಿನ ಲಾರಿಯ ಜಾಕ್ ಕುಸಿದು ಮೆಕ್ಯಾನಿಕ್ ಸಾವಿಗೀಡಾದ ಘಟನೆ ಕೆ.ಆರ್.ಪೇಟೆ ತಾಲೂಕಿನ ಮುರುಕನಹಳ್ಳಿ ಬಳಿ ನಡೆದಿದೆ.

ಲಾರಿ ದುರಸ್ತಿಗೆ ಬಂದಿದ್ದ ಕೆ.ಆರ್. ಪೇಟೆಯ ಮೆಕ್ಯಾನಿಕ್ ಮೋಸಿನ್ (43) ಸಾವಿಗೀಡಾಗಿದ್ದು, ಸತತ ಒಂದು ಗಂಟೆಗಳ ಕಾಲ ಕಬ್ಬಿನ ಕಂತೆಗಳನ್ನು ತೆಗೆದು ಶವವನ್ನು ಹೊರ ತೆಗೆಯಲಾಯಿತು.

ಜಾಕ್ ಕುಸಿದು ಮೆಕ್ಯಾನಿಕ್ ಸಾವು

ಉದ್ದಿನ ಬೋರೆ ಗ್ರಾಮದಿಂದ ಮದ್ದೂರಿನ ಕೆ.ಎಂ.ದೊಡ್ಡಿ ಕಾರ್ಖಾನೆಗೆ ಕಬ್ಬು ಕೊಂಡೊಯ್ಯುತ್ತಿದ್ದ ಲಾರಿ ಮುರುಕನಹಳ್ಳಿ ಬಳಿ ತಾಂತ್ರಿಕ ದೋಷದಿಂದ ಕೆಟ್ಟು ನಿಂತಿತ್ತು. ಲಾರಿ ದುರಸ್ತಿ ವೇಳೆ ಜಾಕ್ ಕೈ ಕೊಟ್ಟು ಮೆಕಾನಿಕ್ ಮೇಲೆ ಲಾರಿಯಲ್ಲಿದ್ದ ಕಬ್ಬು ಕುಸಿದು ಮೆಕಾನಿಕ್ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ.

ಘಟನೆ ಸಂಭವಿಸುತ್ತಲೇ ಲಾರಿ ಚಾಲಕ ಮತ್ತು ಕ್ಲೀನರ್ ಸ್ಥಳದಿಂದ ಪರಾರಿಯಾಗಿದ್ದು, ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details