ಕರ್ನಾಟಕ

karnataka

By

Published : Mar 25, 2020, 10:38 AM IST

ETV Bharat / state

ಲಾಕ್‌ಡೌನ್‌ ಆದೇಶಕ್ಕೆ ಕಿಮ್ಮತ್ತಿಲ್ಲ.. ಅಂತರವಂತೂ ಇಲ್ಲವೇ ಇಲ್ಲ; ಇದು ಮಂಡ್ಯ ಮಾರ್ಕೆಟ್!

ದೇವಾಲಯದ ಬಾಗಿಲು ಹಾಕಿದ್ದರೂ ಕೂಡ ಜನರು ದೇಗುಲದತ್ತ ತೆರಳಿ ನಾಗರ ಕಲ್ಲಿಗೆ ಪೂಜೆ ಸಲ್ಲಿಸಿದ್ದಾರೆ. ಹಬ್ಬಕ್ಕೆ ಹೊಸ ಬಟ್ಟೆ ಕೊಳ್ಳಲು ಅಂಗಡಿಗೆ ಮುಗಿಬಿದ್ದಿದ್ದಾರೆ. ಮಾರ್ಕೆಟ್‌ನಲ್ಲಿ ಎಂದಿನಂತೆ ವ್ಯಾಪಾರ-ವಹಿವಾಟು ನಡೆಯುತ್ತಿದೆ.

Mandya
ಮಂಡ್ಯ ಮಾರ್ಕೆಟ್

ಮಂಡ್ಯ :ಲಾಕ್‌ಡೌನ್​ಗೆ ಸಕ್ಕರೆನಾಡಿನ ಜನ ಕೇರ್​ ಮಾಡದೇ ಯುಗಾದಿ ಆಚರಣೆಗಾಗಿ ಮಾರುಕಟ್ಟೆಯಲ್ಲಿ ಯಾವುದೇ ಅಂತರ ಕಾಯ್ದುಕೊಳ್ಳದೇ ಹೂ-ಹಣ್ಣು, ತರಕಾರಿಗಳ ಖರೀದಿ ಮಾಡಲು ಮುಗಿಬಿದ್ದಿದ್ದಾರೆ.

ಲಾಕ್‌ಡೌನ್‌​ಗೆ ತಲೆ ಕೆಡಿಸಿಕೊಳ್ಳದ ಜನ..

ದೇವಾಲಯದ ಬಾಗಿಲು ಹಾಕಿದ್ದರೂ ಕೂಡ ಜನರು ದೇಗುಲದತ್ತ ತೆರಳಿ ನಾಗರ ಕಲ್ಲಿಗೆ ಪೂಜೆ ಸಲ್ಲಿಸಿದ್ದಾರೆ. ಹಬ್ಬಕ್ಕೆ ಹೊಸ ಬಟ್ಟೆ ಕೊಳ್ಳಲು ಅಂಗಡಿಗೆ ಮುಗಿಬಿದ್ದಿದ್ದಾರೆ. ಮಾರ್ಕೆಟ್‌ನಲ್ಲಿ ಎಂದಿನಂತೆ ವ್ಯಾಪಾರ-ವಹಿವಾಟು ನಡೆಯುತ್ತಿದೆ.

ಹೆದ್ದಾರಿಯಲ್ಲಿ ಖಾಸಗಿ ವಾಹನ‌ಗಳು ಎಗ್ಗಿಲ್ಲದೆ ಓಡಾಟ ಮಾಡುತ್ತಿವೆ. ರಸ್ತೆ ಬದಿ ಕ್ಯಾಂಟೀನ್‌ನಲ್ಲಿ ಟೀ-ಕಾಫಿ ಸೇವೆನೆಗೆ ಗುಂಪು ಗುಂಪಾಗಿ ಜನ ಕೂಡಿದ್ದಾರೆ. ಕೆಲವರು ಊರಿಗೆ ತೆರಳಲು ವಾಹನಗಳ ಹುಡುಕಾಡ್ತಾ ಪರದಾಟ ನಡೆಸುತ್ತಿದ್ದಾರೆ.

ABOUT THE AUTHOR

...view details