ಕರ್ನಾಟಕ

karnataka

ETV Bharat / state

ಮಂಡ್ಯ ಮಿಮ್ಸ್‌ ಆಸ್ಪತ್ರೆಯಲ್ಲಿ ಆಕ್ಸಿಜನ್‌ ಬೆಡ್ ಸಿಗದೆ ಕಾರ್​ನಲ್ಲಿ ನರಳಾಡಿದ ವ್ಯಕ್ತಿ - ಆಸ್ಪತ್ರೆಯಲ್ಲಿ ಆಕ್ಸಿಜನ್‌ ಬೆಡ್ ಸಿಗದೆ ಕಾರ್​ನಲ್ಲಿ ನರಳಾಡಿದ ವ್ಯಕ್ತಿ

ಉಸಿರಾಟದ ಸಮಸ್ಯೆಯಿಂದ ಮೂರು ದಿನಗಳಿಂದ ಮಳವಳ್ಳಿ ಆಸ್ಪತ್ರೆಗೆ ಅಲೆಯುತ್ತಿದ್ದ ಇವರು, ಕೊರೊನಾ ವರದಿ ನೆಗಿಟಿವ್ ಬಂದಿದೆ ಎಂಬ ಕಾರಣಕ್ಕೆ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿಕೊಳ್ಳದೆ ನಿರ್ಲಕ್ಷ್ಯ ತೋರಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ..

ಆಕ್ಸಿಜನ್‌ ಬೆಡ್ ಸಿಗದೆ ಕಾರ್​ನಲ್ಲಿ ನರಳಾಡಿದ ವ್ಯಕ್ತಿ
ಆಕ್ಸಿಜನ್‌ ಬೆಡ್ ಸಿಗದೆ ಕಾರ್​ನಲ್ಲಿ ನರಳಾಡಿದ ವ್ಯಕ್ತಿ

By

Published : May 11, 2021, 12:31 PM IST

ಮಂಡ್ಯ :ಮಿಮ್ಸ್‌ ಆಸ್ಪತ್ರೆಯಲ್ಲಿ ಆಕ್ಸಿಜನ್‌ ಬೆಡ್​ ಸಮಸ್ಯೆ ಉಲ್ಬಣಗೊಳ್ಳುತ್ತಿದ್ದು, ಬೆಡ್ ಸಿಗದೆ ಮೂರು ಗಂಟೆಯಿಂದ ಆಸ್ಪತ್ರೆ ಆವರಣದಲ್ಲಿ ವ್ಯಕ್ತಿಯೋರ್ವ ಕಾರಿನಲ್ಲಿ ಕುಳಿತು ನರಳಾಡಿದ್ದಾರೆ.

ಆಕ್ಸಿಜನ್‌ ಬೆಡ್ ಸಿಗದೆ ಕಾರ್​ನಲ್ಲಿ ನರಳಾಡಿದ ವ್ಯಕ್ತಿ..

ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಸಹಳ್ಳಿ ಗ್ರಾಮದ ನಿವಾಸಿ ಮಹದೇವಪ್ಪ ಚಿಕಿತ್ಸೆ ಸಿಗದೆ ಕಾರನಲ್ಲಿ ನರಾಡುತ್ತಿರುವ ವ್ಯಕ್ತಿಯಾಗಿದ್ದಾರೆ. ಉಸಿರಾಟದ ಸಮಸ್ಯೆಯಿಂದ ಮೂರು ದಿನಗಳಿಂದ ಮಳವಳ್ಳಿ ಆಸ್ಪತ್ರೆಗೆ ಅಲೆಯುತ್ತಿದ್ದ ಇವರು, ಕೊರೊನಾ ವರದಿ ನೆಗಿಟಿವ್ ಬಂದಿದೆ ಎಂಬ ಕಾರಣಕ್ಕೆ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿಕೊಳ್ಳದೆ ನಿರ್ಲಕ್ಷ್ಯ ತೋರಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ಮಳವಳ್ಳಿ ಆಸ್ಪತ್ರೆ ಸಿಬ್ಬಂದಿ ಮಿಮ್ಸ್​ ಆಸ್ಪತ್ರೆಗೆ ಹೋಗುವಂತೆ ಸೂಚಿಸಿದ್ದಾರೆ. ಮಂಡ್ಯದಲ್ಲಿ ಖಾಸಗಿ ಸಿಟಿ ಸ್ಕ್ಯಾನ್ ಮಾಡಿಸಿ ಮೆಡಿಕಲ್ ಕಾಲೇಜಿಗೆ ಬಂದಿರುವ ಮಹಾದೇವಪ್ಪನನ್ನ ಮಿಮ್ಸ್ ಆಸ್ಪತ್ರೆ ಸಿಬ್ಬಂದಿ ಆಸ್ಪತ್ರೆಯಲ್ಲಿ ಬೆಡ್ ಖಾಲಿ ಇಲ್ಲ ಎಂದು ಹೇಳಿ ದಾಖಲಿಸಿಕೊಳ್ಳದೆ ನಿರ್ಲಕ್ಷಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ, ಮೂರು ಗಂಟೆಯಿಂದ ಚಿಕಿತ್ಸೆ ಸಿಗದೆ ರೋಧನೆ ಪಡುತ್ತಿದ್ದಾರೆ.

ಇದನ್ನೂ ಓದಿ : ನಾನು ಡಾಕ್ಟರ್ ಇದೀನಿ, ನನಗೆ ರೂಲ್ಸ್ ಹೇಳ್ತಿಯಾ ಎಂದ ವ್ಯಕ್ತಿಗೆ ಡಿಸಿಪಿ ತರಾಟೆ

For All Latest Updates

ABOUT THE AUTHOR

...view details