ಕರ್ನಾಟಕ

karnataka

ETV Bharat / state

ಮಂಡ್ಯ ಕಾಂಗ್ರೆಸ್​​​ ಟಿಕೆಟ್​​ ಕಗ್ಗಂಟು: ಕೈ​​ ಕಾರ್ಯಕರ್ತರಿಂದಲೇ ಗೋ ಬ್ಯಾಕ್​ ಡಿಕೆಶಿ ಹೋರಾಟಕ್ಕೆ ನಿರ್ಧಾರ - go back dkc

ಸುಮಲತಾ ವಿರುದ್ಧ ಡಿ. ಕೆ. ಶಿವಕುಮಾರ್​ ಅಖಾಡಕ್ಕೆ ಇಳಿದರೆ, ಕಾಂಗ್ರೆಸ್​ ಕಾರ್ಯಕರ್ತರೆ ಗೋ ಬ್ಯಾಕ್​ ಡಿಕೆಶಿ ಚಳುವಳಿ ಮಾಡಲು ನಿರ್ಧಾರ ಮಾಡಿದ್ಧಾರೆ.

ಕಾಂಗ್ರೆಸ್ ಮಾಜಿ ಸದಸ್ಯ ಅನಿಲ್ ಕುಮಾರ್

By

Published : Mar 12, 2019, 5:34 PM IST

ಮಂಡ್ಯ: ಸಕ್ಕರೆ ಜಿಲ್ಲೆಯ ಕಾಂಗ್ರೆಸ್ ಟಿಕೆಟ್ ವಿಚಾರ ಕಂಗ್ಗಟ್ಟಾಗುತ್ತಿದ್ದು, ಜೆಡಿಎಸ್ ಮೈತ್ರಿ ಧರ್ಮ ಪಾಲಿಸಲು ಸಚಿವ ಡಿ.ಕೆ.ಶಿವಕುಮಾರ್ ಮುಂದಾಗಿದ್ದಾರೆ. ಒಂದೊಮ್ಮೆ ಸುಮಲತಾ ವಿರುದ್ಧ ಡಿ.ಕೆ.ಶಿವಕುಮಾರ್ ಅಖಾಡಕ್ಕೆ ಇಳಿದರೆ ಕಾಂಗ್ರೆಸ್ ಕಾರ್ಯಕರ್ತರೇ ಗೋ ಬ್ಯಾಕ್ ಡಿಕೆಶಿ ಹೋರಾಟ ಶುರು ಮಾಡಲು ನಿರ್ಧಾರ ಮಾಡಿದ್ದಾರೆ.

ನಗರಸಭೆಯ ಕಾಂಗ್ರೆಸ್ ಮಾಜಿ ಸದಸ್ಯ ಅನಿಲ್ ಕುಮಾರ್ ಗೋ ಬ್ಯಾಕ್ ಡಿಕೆಶಿ ಹೋರಾಟ ಮಾಡಲು ನಿರ್ಧಾರ ಮಾಡಿದ್ದಾರೆ. ಇದಕ್ಕೆ ಹಲವು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಂಬಿ ಅಭಿಮಾನಿಗಳು ಬೆಂಬಲವಾಗಿ ನಿಂತಿದ್ದಾರೆ.

ಕಾಂಗ್ರೆಸ್ ಮಾಜಿ ಸದಸ್ಯ ಅನಿಲ್ ಕುಮಾರ್

ಲೋಕಸಭೆ ಚುನಾವಣೆ ವೇಳೆ ಸಚಿವ ಡಿ.ಕೆ.ಶಿವಕುಮಾರ್ ಜೆಡಿಎಸ್ ಏಜೆಂಟ್ ಆಗಿ ಬಂದರೆ ಗೋ ಬ್ಯಾಕ್ ಚಳುವಳಿ ಮಾಡಲು ನಿರ್ಧಾರ ಮಾಡಲಾಗಿದೆ. ಹಾಗಾಗಿ ಸಂಧಾನಕ್ಕೆ ಬರಬೇಡಿ ಅಂತ ಕಾರ್ಯಕರ್ತರು ಮನವಿ ಮಾಡಿದ್ದು, ಇಲ್ಲಿನ ಸಮಸ್ಯೆಯನ್ನು ನಾವೇ ನೋಡಿಕೊಳ್ಳುತ್ತೇವೆ ಎಂದು ಹೇಳುತ್ತಿದ್ದಾರೆ.

For All Latest Updates

TAGGED:

go back dkc

ABOUT THE AUTHOR

...view details