ಕರ್ನಾಟಕ

karnataka

ETV Bharat / state

ಕರ್ಣನ ಹುಟ್ಟುಹಬ್ಬವನ್ನು ಹಬ್ಬದಂತೆ ಆಚರಿಸಿದ ಗ್ರಾಮಸ್ಥರು... ಅಭಿಗೆ ಅದ್ಧೂರಿ ಸ್ವಾಗತ - undefined

ಮಂಡ್ಯ ಜಿಲ್ಲೆಯ ನಿಡಘಟ್ಟದ ಹೊಟ್ಟೇಗೌಡನ ದೊಡ್ಡಿ ಗ್ರಾಮಸ್ಥರು ಅಂಬಿ ಹುಟ್ಟುಹಬ್ಬವನ್ನು ಆಚರಿಸಿದರು. ಕಾರ್ಯಕ್ರಮಕ್ಕೆ ಬಂದಿದ್ದ ಅಭಿಗೆ ಶುಭ ಹಾರೈಸಿ ಸಾರ್ವಜನಿಕರಿಗೆ ಸಿಹಿ ವಿತರಿಸಿದರು.

ಅಂಬಿ ಹುಟ್ಟುಹಬ್ಬ ಹಿನ್ನಲೆ ಕೇಕ್​ ಕತ್ತರಿಸಿದ ಅಭಿ

By

Published : May 29, 2019, 5:16 PM IST

ಮಂಡ್ಯ: ಗಡಿ ಪ್ರದೇಶ ನಿಡಘಟ್ಟದ ಬಳಿ ಕೇಕ್ ಕತ್ತರಿಸಿ ಅಂಬಿ ಜಯಂತ್ಯುತ್ಸವವನ್ನು ಆಚರಿಸಿದ ಅಭಿಮಾನಿಗಳು ಜಿಲ್ಲೆಗೆ ಆಗಮಿಸಿದ್ದ ಅಭಿಷೇಕ್​ಗೆ ಅದ್ದೂರಿ ಸ್ವಾಗತ ಕೋರಿದರು.

ಅಂಬಿ ಜಯಂತ್ಯುತ್ಸವ ಹಿನ್ನಲೆ ಕೇಕ್​ ಕತ್ತರಿಸಿ ಸಂಭ್ರಮಿಸಿದ ಜನ

ಮದ್ದೂರು ತಾಲೂಕು ಹೊಟ್ಟೇಗೌಡನ ದೊಡ್ಡಿ ಗ್ರಾಮಸ್ಥರು ಕೆಲವು ವರ್ಷಗಳಿಂದ ಅಂಬರೀಶ್​ ಹುಟ್ಟಿದ ಹಬ್ಬವನ್ನು ಗ್ರಾಮದ ಹಬ್ಬದಂತೆ ಆಚರಿಸಿಕೊಂಡು ಬಂದಿದ್ದಾರೆ. ಈ ಬಾರಿ ಅಂಬರೀಶ್​ ಇಲ್ಲದಿದ್ರೂ ಅವರ ಜಯಂತ್ಯುತ್ಸವವನ್ನು ಆಚರಿಸಿದರು. ಈ ಕಾರ್ಯಕ್ರಮದಲ್ಲಿ ಅಂಬಿ ಪುತ್ರ ಅಭಿಷೇಕ್​ ಪಾಲ್ಗೊಂಡಿದ್ದಕ್ಕೆ ಗ್ರಾಮಸ್ಥರ ಸಂಭ್ರಮ ಇಮ್ಮಡಿಯಾಗಿತ್ತು.

ಈ ವೇಳೆ ಅಭಿಷೇಕ್​ಗೆ ಹಾರ ಹಾಕಿ, ಅವನ ಕೈಯಿಂದಲೇ ಕೇಕ್ ಕಟ್​ ಮಾಡಿಸಿದರು. ನಂತರ ಅಭಿಗೆ ಶುಭ ಹಾರೈಸಿ, ಸಮಾವೇಶದೆಡೆಗೆ ಕಳುಹಿಸಿಕೊಟ್ಟರು. ಆಚರಣೆಯ ಕೊನೆಯಲ್ಲಿ ವಾಹನ ಸವಾರರಿಗೆ ಸಿಹಿ ಹಂಚಲಾಯಿತು.

For All Latest Updates

TAGGED:

ABOUT THE AUTHOR

...view details