ಕರ್ನಾಟಕ

karnataka

ETV Bharat / state

ಕೆಆರ್​​​ಎಸ್‌ನಲ್ಲಿ ಕಾವೇರಿ ರಥೋತ್ಸವ: ತೆಪ್ಪದಲ್ಲಿ ಭವ್ಯ ಮೆರವಣಿಗೆ - ಕಾವೇರಿ ಮಾತೆಗೆ ವಿಶೇಷ ಪೂಜೆ

ಶ್ರೀರಂಗಪಟ್ಟಣ ತಾಲೂಕಿನ ಕೆಆರ್​​​ಎಸ್‌ನಲ್ಲಿ ನೀರಾವರಿ ಅಧಿಕಾರಿಗಳು, ನಾಗರೀಕರು ಮಧ್ಯಾಹ್ನ ರಥೋತ್ಸವ ನಡೆಸಿ ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಕಾವೇರಿ ಮಾತೆಯ ಮೂರ್ತಿಯನ್ನು ಯಾಂತ್ರೀಕೃತ ದೋಣಿಯಲ್ಲಿ ಅಲಂಕಾರ ಸಹಿತ ಕೂರಿಸಿಕೊಂಡು ತೆಪ್ಪೋತ್ಸವ ಆಚರಿಸಲಾಯಿತು.

ಕೆಆರ್​​​ಎಸ್‌ನಲ್ಲಿ ಕಾವೇರಿ ರಥೋತ್ಸವ

By

Published : Oct 19, 2019, 4:26 AM IST

ಮಂಡ್ಯ: ಕಾವೇರಿ ಮಾತೆ ತೀರ್ಥೋದ್ಭವ ಭಕ್ತರಲ್ಲಿ ಪುಳಕ ಮೂಡಿಸಿತ್ತು. ಅತ್ತ ತೀರ್ಥೋದ್ಭವ ಆದರೆ ಇತ್ತ ಕೆಆರ್​​ಎಸ್‌ನಲ್ಲಿ ರಥೋತ್ಸವ ಹಾಗೂ ತೆಪ್ಪೋತ್ಸವ ಸಂಭ್ರಮದಿಂದ ನಡೆಯಿತು.

ಶ್ರೀರಂಗಪಟ್ಟಣ ತಾಲೂಕಿನ ಕೆಆರ್​​​ಎಸ್‌ನಲ್ಲಿ ನೀರಾವರಿ ಅಧಿಕಾರಿಗಳು, ನಾಗರೀಕರು ಮಧ್ಯಾಹ್ನ ರಥೋತ್ಸವ ನಡೆಸಿ ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿದರು. ರಾತ್ರಿ ಬೋಟಿಂಗ್ ಪಾಯಿಂಟ್‌ನಲ್ಲಿ ಕಾವೇರಿ ಮಾತೆ ಮೂರ್ತಿಯ ತೆಪ್ಪೋತ್ಸವ ಅದ್ಧೂರಿಯಾಗಿ ನಡೆಯಿತು.

ಕೆಆರ್​​​ಎಸ್‌ನಲ್ಲಿ ಕಾವೇರಿ ರಥೋತ್ಸವ

ಕಾವೇರಿ ಮಾತೆಯ ಮೂರ್ತಿಯನ್ನು ಯಾಂತ್ರೀಕೃತ ದೋಣಿಯಲ್ಲಿ ಅಲಂಕಾರ ಸಹಿತ ಕೂರಿಸಿಕೊಂಡು ತೆಪ್ಪೋತ್ಸವ ಆಚರಿಸಲಾಯಿತು. ಅಧಿಕಾರಿಗಳು ಸೇರಿದಂತೆ ಪ್ರವಾಸಿಗರೂ ಮಾತೆಗೆ ಉಘೇ ಉಘೇ ಎನ್ನುವ ಮೂಲಕ ಪ್ರಾರ್ಥನೆ ಸಲ್ಲಿಸಿದರು.

ABOUT THE AUTHOR

...view details