ಕರ್ನಾಟಕ

karnataka

By

Published : Aug 3, 2020, 4:55 PM IST

Updated : Aug 3, 2020, 5:48 PM IST

ETV Bharat / state

ಕೊರೊನಾದಿಂದ ಗುಣಮುಖರಾದ ಕಾಮೇಗೌಡರು: ಗೌರವಗಳೊಂದಿಗೆ‌ ಆಸ್ಪತ್ರೆಯಿಂದ ಬಿಡುಗಡೆ

ಕೊರೊನಾದಿಂದ ಗುಣಮುಖರಾದ ಕೆರೆಗಳ ನಿರ್ಮಾತೃ ಕಲ್ಮನೆ ಕಾಮೇಗೌಡರನ್ನು, ಜಿಲ್ಲಾಡಳಿತದಿಂದ ಬ್ಯಾಂಡ್ ಮೂಲಕ ಹೂ ಮಳೆಗೈದು ಅಭಿನಂದನೆ ಸಲ್ಲಿಸಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.

Kamegowadar recovering from Corona
ಗೌರವಗಳೊಂದಿಗೆ‌ ಆಸ್ಪತ್ರೆಯಿಂದ ಬಿಡುಗಡೆ

ಮಂಡ್ಯ: ಕೆರೆಗಳ ನಿರ್ಮಾತೃ ಕಲ್ಮನೆ ಕಾಮೇಗೌಡರು ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದು, ಮಿಮ್ಸ್‌ನಿಂದ ಬಿಡುಗಡೆಗೊಂಡಿದ್ದಾರೆ.

ಕೊರೊನಾದಿಂದ ಗುಣಮುಖರಾದ ಕಾಮೇಗೌಡರು

ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮದ ಪರಿಸರ ಪ್ರೇಮಿ ಕೆರೆ ಕಾಮೇಗೌಡರಿಗೆ ಸೋಂಕು ಕಾಣಿಸಿಕೊಂಡಿದ್ದರಿಂದ ಮಿಮ್ಸ್‌ಗೆ ದಾಖಲಾಗಿದ್ದರು. ಗುಣಮುಖರಾದ ಅವರನ್ನು ಜಿಲ್ಲಾಡಳಿತದಿಂದ ಬ್ಯಾಂಡ್ ಮೂಲಕ ಹೂ ಮಳೆಗೈದು ಅಭಿನಂದನೆ ಸಲ್ಲಿಸಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.

ಮಿಮ್ಸ್ ಆವರಣದಲ್ಲಿ ಕೆ‌ರೆ ಕಾಮೇಗೌಡರಿಗೆ ಹೂ ಮಳೆಗೈದ ಜಿಲ್ಲಾಧಿಕಾರಿ ಡಾ.ಎಂ.ವಿ‌.ವೆಂಕಟೇಶ್ ಹಾಗೂ ಅಧಿಕಾರಿಗಳು ಅಭಿನಂದನೆ ಸಲ್ಲಿಸಿದರು.

Last Updated : Aug 3, 2020, 5:48 PM IST

ABOUT THE AUTHOR

...view details