ಮಂಡ್ಯ: ಬರೀ ಸಿದ್ದರಾಮಯ್ಯ ಅವರನ್ನು ನೀವು ಮ್ಯಾನೇಜ್ ಮಾಡಿ ಸಾಕು ಎಂದು ಡಿ.ಕೆ.ಶಿವಕುಮಾರ್ ಅವರಿಗೆ ಸಚಿವ ಜಗದೀಶ್ ಶೆಟ್ಟರ್ ತಿರುಗೇಟು ನೀಡಿದರು. ಡಿ.ಕೆ.ಶಿವಕುಮಾರ್ಗೆ ತಾಕತ್ತಿದ್ದರೆ ಪಾರ್ಟಿ ಕಟ್ಟಿ ತೋರಿಸಲಿ, ಇಲ್ಲವಾದರೆ ಬರೀ ಸಿದ್ದರಾಮಯ್ಯರನ್ನು ಮ್ಯಾನೇಜ್ ಮಾಡಿ ಸಾಕು ಎಂದು ಅವರು ವ್ಯಂಗ್ಯವಾಡಿದರು.
ಮಂಡ್ಯದಲ್ಲಿ ಮಾತನಾಡಿದ ಅವರು, ವಂಶಪಾರಂಪರ್ಯ ಇರುವವರೆಗೂ ಕಾಂಗ್ರೆಸ್ ಉದ್ದಾರವಾಗುವುದಿಲ್ಲ. ಇದನ್ನು ನಾವು ಹೇಳುತ್ತಿಲ್ಲ ಕಾಂಗ್ರೆಸ್ ನಾಯಕರೇ ಹೇಳುತ್ತಿದ್ದಾರೆ. ಡಿಕೆಶಿ ಒಂದು ಕಡೆ, ಸಿದ್ದರಾಮಯ್ಯ ಒಂದು ಕಡೆ ಇರೋದ್ರಿಂದ ಕಾಂಗ್ರೆಸ್ಗೆ ಉಳಿವಿಲ್ಲ.