ಮಂಡ್ಯ:ನಿಖಿಲ್ ಕುಮಾರಸ್ವಾಮಿ ಈ ರಾಜ್ಯದ ಮುಖ್ಯಮಂತ್ರಿಯಾಗ್ತಾರೆ ಎಂದು ಜೆಡಿಎಸ್ ಎಂಎಲ್ಸಿ ಅಪ್ಪಾಜಿಗೌಡ ಭವಿಷ್ಯ ನುಡಿದಿದ್ದಾರೆ.
ಲೋಕ ಅಖಾಡದಲ್ಲಿ ಗೆದ್ದರೆ ನಿಖಿಲ್ ಸಿಎಂ ಆಗ್ತಾರೆ: ಎಂಎಲ್ಸಿ ಅಪ್ಪಾಜಿಗೌಡ ಭವಿಷ್ಯ! - undefined
ಕುಮಾರಸ್ವಾಮಿ ಲೋಕಸಭೆಗೆ ಆಯ್ಕೆ ಆಗಿ ಹೋಗಿದ್ದರು. ನಂತರ ಅವರು ಮುಖ್ಯಮಂತ್ರಿಯಾಗಿದ್ದಾರೆ. ಅದೇ ರೀತಿ ನಿಖಿಲ್ ಈ ಚುನಾವಣೆಯಲ್ಲಿ ಗೆದ್ದರೆ ಅವರು ಕೂಡ ಈ ರಾಜ್ಯದ ಮುಖ್ಯಮಂತ್ರಿಯಾಗ್ತಾರೆ ಎಂದು ಎಂಎಲ್ಸಿ ಅಪ್ಪಾಜಿಗೌಡ ಭವಿಷ್ಯ ನುಡಿದಿದ್ದಾರೆ.
![ಲೋಕ ಅಖಾಡದಲ್ಲಿ ಗೆದ್ದರೆ ನಿಖಿಲ್ ಸಿಎಂ ಆಗ್ತಾರೆ: ಎಂಎಲ್ಸಿ ಅಪ್ಪಾಜಿಗೌಡ ಭವಿಷ್ಯ!](https://etvbharatimages.akamaized.net/etvbharat/images/768-512-2946219-thumbnail-3x2-nikhil.jpg)
ಅಪ್ಪಾಜಿಗೌಡ ಭವಿಷ್ಯ
ಅಪ್ಪಾಜಿಗೌಡ ಭವಿಷ್ಯ
ನಾಗಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ಕುಮಾರಸ್ವಾಮಿ ಕೂಡ 1996 ರಲ್ಲಿ ಗೆದ್ದು ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸಿದ್ರು. ಅದೇ ರೀತಿ ನಿಖಿಲ್ ರನ್ನು ಕೂಡ ಈ ಬಾರಿ ಲೋಕಸಭೆಗೆ ಕಳುಹಿಸಿಕೊಡಿ ಎಂದು ಮನವಿ ಮಾಡಿದರು.
ಕುಮಾರಸ್ವಾಮಿ ಲೋಕಸಭೆಗೆ ಹೋದ ನಂತರ ಮುಖ್ಯಮಂತ್ರಿಯಾಗಿದ್ದಾರೆ. ಅದೇ ರೀತಿ ನಿಖಿಲ್ ಕೂಡ ಈ ರಾಜ್ಯದ ಮುಖ್ಯಮಂತ್ರಿಯಾಗ್ತಾರೆ. ಅಭಿವೃದ್ಧಿಗಾಗಿ ನಿಖಿಲ್ ಗೆಲ್ಲಿಸಿ ಎಂದುಅಪ್ಪಾಜಿಗೌಡಮತ ಬೇಟೆ ನಡೆಸಿದರು.