ಮಂಡ್ಯ: ಬಿಜೆಪಿಯವರಂತಹ ಜಾತಿವಾದಿಗಳು ಇನ್ಯಾರೂ ಇಲ್ಲ. ನನಗೆ ಆ ಜಾತಿ ಕಂಡರೆ ಆಗಲ್ಲ, ಈ ಜಾತಿ ಕಂಡರೆ ಆಗಲ್ಲ ಎಂದು ಹೇಳಿ ಜನರನ್ನ ಎತ್ತಿಕಟ್ಟಿ, ನನ್ನ ಹೇಳಿಕೆಯನ್ನು ತಿರುಚಿ ಪ್ರತಿಭಟನೆ ಮಾಡಿಸಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಅರಸು ನಂತರ 5 ಪೂರ್ಣಗೊಳಿಸಿದ ಸಿಎಂ ಅಂದ್ರೆ ನಾನು, ಅದಕ್ಕೆ ಬಿಜೆಪಿಯವರಿಗೆ ಹೊಟ್ಟೆಉರಿ: ಸಿದ್ದರಾಮಯ್ಯ - siddaramaih outrage against BJP
ನಾನು 5 ವರ್ಷ ಸಿಎಂ ಆಗಿದ್ದೇ ಅನ್ನೋ ಹೊಟ್ಟೆ ಉರಿಯಿಂದ ಹಾಗೆ ಹೇಳ್ತಾರೆ. ದೇವರಾಜ ಅರಸು ನಂತರ ನಾನು ಮಾತ್ರ 5 ಪೂರ್ಣಾವಧಿ ಸಿಎಂ ಆಗಿದ್ದವನು. ಈ ಹೊಟ್ಟೆಯುರಿಯಿಂದ ಸಿದ್ದರಾಮಯ್ಯ ಅವರಿಗೆ ಆ ಜಾತಿ ಕಂಡರೆ ಆಗಲ್ಲ, ಈ ಜಾತಿ ಕಂಡರೆ ಆಗಲ್ಲ ಎಂದು ಹಬ್ಬಿಸುತ್ತಿದ್ದಾರೆ. ಅವರಂತಹ ಕೊಳಕರು, ಜಾತಿವಾದಿಗಳು ಇನ್ಯಾರೂ ಇಲ್ಲ. ನೀವು ಅವರ ಬಗ್ಗೆ ಹುಷಾರಾಗಿರಿ ಎಂದು ಕಿವಿಮಾತು ಹೇಳಿದರು.
![ಅರಸು ನಂತರ 5 ಪೂರ್ಣಗೊಳಿಸಿದ ಸಿಎಂ ಅಂದ್ರೆ ನಾನು, ಅದಕ್ಕೆ ಬಿಜೆಪಿಯವರಿಗೆ ಹೊಟ್ಟೆಉರಿ: ಸಿದ್ದರಾಮಯ್ಯ former CM Siddaramaih](https://etvbharatimages.akamaized.net/etvbharat/prod-images/768-512-13580199-922-13580199-1636408013740.jpg)
ನಗರದಲ್ಲಿ ಕುರುಬರ ಸಂಘದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹಾನಗಲ್ ಕಾರ್ಯಕ್ರಮದಲ್ಲಿ ನಾನು ಸಂವಿಧಾನ ಬದಲಾವಣೆ ಮಾಡ್ತೀವಿ ಅಂದವರ ಪಕ್ಷಕ್ಕೆ ಹಲವರು ಹಿಂದುಳಿದ ನಾಯಕರು ತಮ್ಮ ಸ್ವಾರ್ಥಕ್ಕಾಗಿ ಹೋಗ್ತಿದ್ದಾರೆ ಎಂದು ನಾನು ಭಾಷಣ ಮಾಡಿದ್ದೆ. ಬಿಜೆಪಿಗೆ ಕೆಲ ದಲಿತರು ಹೊಟ್ಟೆಪಾಡಿಗಾಗಿ ಬಿಜೆಪಿಗೆ ಹೋಗುತ್ತಿದ್ದಾರೆ ಎಂದು ಹೇಳಿದ್ದೇನೆಂದು ತಿರುಚಿ ನನ್ನ ವಿರುದ್ಧ ಪ್ರತಿಭಟನೆ ಮಾಡಿಸಿದರು ಎಂದು ಸಿದ್ದರಾಮಯ್ಯ ತಿಳಿಸಿದರು.
ಬಿಜೆಪಿ ಬಗ್ಗೆ ಹುಷಾರಾಗಿರಿ:
ನಾನು 5 ವರ್ಷ ಸಿಎಂ ಆಗಿದ್ದೇ ಅನ್ನೋ ಹೊಟ್ಟೆ ಉರಿಯಿಂದ ಹಾಗೆ ಹೇಳ್ತಾರೆ. ದೇವರಾಜ ಅರಸು ನಂತರ ನಾನು ಮಾತ್ರ 5 ಪೂರ್ಣಾವಧಿ ಸಿಎಂ ಆಗಿದ್ದವನು. ಈ ಹೊಟ್ಟೆಯುರಿಯಿಂದ ಸಿದ್ದರಾಮಯ್ಯ ಅವರಿಗೆ ಆ ಜಾತಿ ಕಂಡರೆ ಆಗಲ್ಲ, ಈ ಜಾತಿ ಕಂಡರೆ ಆಗಲ್ಲ ಎಂದು ಹಬ್ಬಿಸುತ್ತಿದ್ದಾರೆ. ಅವರಂತಹ ಕೊಳಕರು, ಜಾತಿವಾದಿಗಳು ಇನ್ಯಾರೂ ಇಲ್ಲ. ನೀವು ಅವರ ಬಗ್ಗೆ ಹುಷಾರಾಗಿರಿ ಎಂದು ಕಿವಿಮಾತು ಹೇಳಿದರು.