ಮಂಡ್ಯ: ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿ ರಾತ್ರೋರಾತ್ರಿ ಕಳ್ಳತನವಾಗಿರುವ ಘಟನೆ ಜಿಲ್ಲೆಯ ಕೆ.ಆರ್. ಪೇಟೆ ಪಟ್ಟಣದ ಅಗ್ರಹಾರ ಬೀದಿಯಲ್ಲಿ ನಡೆದಿದೆ.
ಚಿಣ್ಣರು ಪ್ರತಿಷ್ಠಾಪಿಸಿದ್ದ ಗಣೇಶ ರಾತ್ರೋರಾತ್ರಿ ಮಾಯ.. ಹುಂಡಿ ಜತೆ ಗಣಪತಿಯೂ ಕಳವು - ‘ಗಣೇಶ ವಿಗ್ರಹ ಕಳವು
ಗಣೇಶ ಮೂರ್ತಿ ಜತೆಗೆ ಕಿಡಿಗೇಡಿಗಳು ಹುಂಡಿಯನ್ನೂ ಕದ್ದಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.
ಗಣೇಶ ಮೂರ್ತಿ
ಮಕ್ಕಳು ಗ್ರಾಮಸ್ಥರಿಂದ ಹಣ ಸಂಗ್ರಹಿಸಿ ಗಣೇಶ ಮೂರ್ತಿಯನ್ನು ಕೂರಿಸಿದ್ದರು. ನಿತ್ಯ ಮಕ್ಕಳು ಹಾಗೂ ಪೋಷಕರು ಪೂಜೆ ಸಲ್ಲಿಸುತ್ತಿದ್ದರು. ಆದ್ರೆ, ಇಂದು ಮುಂಜಾನೆ 3 ಗಂಟೆ ಸುಮಾರಿಗೆ ದುಷ್ಕರ್ಮಿಗಳು ಗಣೇಶ ವಿಗ್ರಹದ ಜತೆಗೆ ಹುಂಡಿಯನ್ನೂ ಹೊತ್ತೊಯ್ದಿದ್ದಾರೆ.
ಗಣಪತಿ ವಿಗ್ರಹ ಕದ್ದೊಯ್ದಿರುವವರಿಗೆ ಗ್ರಾಮಸ್ಥರು ಹಿಡಿಶಾಪ ಹಾಕಿದ್ದು, ಹೊಸ ಮೂರ್ತಿಯನ್ನು ಕೂರಿಸುವುದಾಗಿ ಹೇಳಿದ್ದಾರೆ.