ಮಂಡ್ಯ:ಮಾಜಿ ಸಚಿವ, ರೆಬೆಲ್ ನಾಯಕ ಎನ್ ಚೆಲುವರಾಯಸ್ವಾಮಿ ಆಟೋ ಚಾಲನೆ ಮೂಲಕ ತಮ್ಮ ಅಭಿಮಾನಿಯ ಹೊಸ ಉದ್ಯೋಗಕ್ಕೆ ಶುಭ ಕೋರಿದ್ದಾರೆ.
ಆಟೋ ಚಾಲಕರಾದ್ರು ಚೆಲುವರಾಯಸ್ವಾಮಿ... ಅಭಿಮಾನಿಗೆ ಶುಭ ಕೋರಿದ ರೆಬೆಲ್ ನಾಯಕ - undefined
ರಾಜಕೀಯ ನಾಯಕರು ಅಭಿಮಾನಿಗಳಿಗಾಗಿ ಕೆಲವೊಮ್ಮೆ ಏನಾದರೂ ಕೆಲಸ ಮಾಡಲು ತಯಾರಿರುತ್ತಾರೆ ಎನ್ನುವುದು ನಿಜ. ಯಾಕಂತಿರಾ... ಈ ಸುದ್ದಿಯಲ್ಲೂ ಒಬ್ಬ ನಾಯಕ ತನ್ನ ಅಭಿಮಾನಿಗಾಗಿ ಆಟೋ ಚಾಲನೆ ಮಾಡಿದ್ಧಾರೆ. ಯಾರವರು, ಏನು ಕತೆ ಎನ್ನೋದು ನೀವೇ ನೋಡಿ.

ರೆಬೆಲ್ ನಾಯಕ
ಬೆಂಗಳೂರಿನಲ್ಲಿ ಉದ್ಯೋಗ ಹುಡುಕಿಕೊಂಡು ಹೋಗಿದ್ದ ನಾಗಮಂಗಲ ತಾಲೂಕಿನ ಚಂದನಹಳ್ಳಿಯ ಅಂಜನ್ ಗೌಡ ಆಟೋ ಖರೀದಿ ಮಾಡಿದ್ದರು. ತಾವು ಚಾಲನೆ ಮಾಡುವುದಕ್ಕೂ ಮೊದಲು ತಮ್ಮ ನೆಚ್ಚಿನ ನಾಯಕ ಚೆಲುವರಾಯಸ್ವಾಮಿ ಅವರಿಂದ ಚಾಲನೆ ನೀಡಬೇಕು ಎಂಬ ಇರಾದೆ ಹೊಂದಿದ್ದರು.
ಹೀಗಾಗಿ ಚೆಲುವರಾಯಸ್ವಾಮಿ ಆಟೋ ಚಾಲನೆ ಮಾಡುವ ಮೂಲಕ ಶುಭ ಕೋರಿದ್ದಾರೆ. ತಮ್ಮ ಅನುಭವವನ್ನು ಇನ್ಸ್ಟಾಗ್ರಾಮ್ಖಾತೆಯಲ್ಲಿ ಹಂಚಿಕೊಂಡಿದ್ದಾರೆ.