ಮಂಡ್ಯ:ಮಾಜಿ ಸಚಿವ ಚೆಲುವರಾಯಸ್ವಾಮಿ ಟ್ವೀಟ್ನಲ್ಲಿ ರಾಜಕೀಯ ವಿಶ್ಲೇಷಣೆ ಮಾಡಡಿ ಗಮನ ಸೆಳೆದಿದ್ದಾರೆ. ಜಯಚಾಮರಾಜ ಒಡೆಯರ್ ಜಯಂತಿಗೆ ಶುಭ ಕೋರಿ ಮಾಡಿರುವ ಟ್ವೀಟ್ ವಿಶೇಷವಾಗಿದ್ದು, ಸದ್ಯ ಕೊಂಚಮಟ್ಟಿಗೆ ಚರ್ಚೆಗೂ ಕಾರಣವಾಗಿದೆ.
ಒಡೆಯರ್ ಜಯಂತಿ ನೆಪದಲ್ಲಿ ಪ್ರಸಕ್ತ ರಾಜಕಾರಣವನ್ನು ವಿಡಂಬಿಸಿದ ಚೆಲುವರಾಯಸ್ವಾಮಿ - undefined
ಮಾಜಿ ಸಚಿವ ಚಲುವರಾಯಸ್ವಾಮಿ ತಮ್ಮ ಟ್ವೀಟರ್ನಲ್ಲಿ ಜಯಚಾಮರಾಜ ಒಡೆಯರ್ ಜಯಂತಿಗೆ ಶುಭ ಕೋರಿದ್ದು, ಪರೋಕ್ಷವಾಗಿ ಸಿಎಂ ಕುಮಾರಸ್ವಾಮಿಗೆ ಟಾಂಗ್ ನೀಡಿದಂತಿದೆ.

ಚಲುವರಾಯಸ್ವಾಮಿ ಟ್ವೀಟ್
"ಎಲ್ಲರೂ ಸಿಂಹಾಸನಾರೂಢರಾಗಿ ಮಹಾರಾಜರಾದರೆ ಜಯಚಾಮರಾಜ ಒಡೆಯರ್ರವರು ಅದನ್ನು ತ್ಯಜಿಸಿ ಜನರ ಹೃದಯ ಸಿಂಹಾಸನದ ಅಧಿದೇವತೆಯಾದವರು" ಎಂದು ಜಯಚಾಮರಾಜ ಒಡೆಯರ್ ಜಯಂತಿ ಕುರಿತು ಎನ್.ಚೆಲುವರಾಯಸ್ವಾಮಿ ಬರೆದುಕೊಂಡಿದ್ದಾರೆ.
ಈ ಟ್ವೀಟ್ ಸದ್ಯ ಎಲ್ಲರ ಗಮನ ಸೆಳೆದಿದ್ದು, ಶುಭಾಶಯ ಕೋರುವ ನೆಪದಲ್ಲಿ ಇಂದಿನ ರಾಜಕೀಯ ಪರಿಸ್ಥಿತಿ ಕುರಿತು ಹಾಗೂ ಸಿಎಂ ಕುಮಾರಸ್ವಾಮಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ ಎನ್ನುವ ಮಾತು ಕೇಳಿಬಂದಿದೆ.