ಮಂಡ್ಯ:ಕೊರೊನಾ ನಡುವೆಯೂ ಪರಂಗಿ, ಮಾವು ಬೆಳೆದಿದ್ದ ರೈತನ ತೋಟದಲ್ಲಿ ಕಾಡಾನೆಗಳು ದಾಳಿ ನಡೆಸಿ, ಅಪಾರ ಪ್ರಮಾಣದ ಬೆಳೆಯನ್ನು ಹಾನಿಗೊಳಿಸಿವೆ. ಇಲ್ಲಿನ ಮಳವಳ್ಳಿ ತಾಲೂಕಿನ ಧನಗೂರು ಬಳಿ ರೈತ ಸಾಧಿಕ್ ಪಾಷಾ ಎಂಬುವರ ತೋಟದಲ್ಲಿ ದಾಳಿ ಮಾಡಿರುವ ಕಾಡಾನಗಳ ಹಿಂಡು, ಸುಮಾರು 2 ಲಕ್ಷ ರೂಪಾಯಿಗೂ ಹೆಚ್ಚು ನಷ್ಟ ಉಂಟುಮಾಡಿವೆ.
ಮಂಡ್ಯದಲ್ಲಿ ಕಾಡಾನೆ ದಾಳಿ: 2 ಲಕ್ಷ ಮೌಲ್ಯದ ಬೆಳೆ ಹಾನಿ - Malavalli Taluk
ಲಾಕ್ಡೌನ್ನಿಂದಾಗಿ ಸಂಕಷ್ಟ ಎದುರಿಸುತ್ತಿರುವ ರೈತರಿಗೆ ಕಾಡು ಪ್ರಾಣಿಗಳ ಹಾವಳಿ ಮತ್ತಷ್ಟು ತಲೆನೋವಾಗಿದೆ. ಇದೀಗ ಮಂಡ್ಯದ ಮಳವಳ್ಳಿ ಬಳಿಯ ರೈತ ಬೆಳದಿದ್ದ ಮಾವು, ಬಾಳೆ ಬೆಳೆಯನ್ನು ಕಾಡಾನೆಗಳು ದಾಳಿ ಮಾಡಿ ಸಂಪೂರ್ಣ ನಾಶ ಮಾಡಿವೆ.
![ಮಂಡ್ಯದಲ್ಲಿ ಕಾಡಾನೆ ದಾಳಿ: 2 ಲಕ್ಷ ಮೌಲ್ಯದ ಬೆಳೆ ಹಾನಿ Elephant attacks on forms : 2 lakhs worth of crop damage](https://etvbharatimages.akamaized.net/etvbharat/prod-images/768-512-7266235-598-7266235-1589902283807.jpg)
ರೈತನ ತೋಟಕ್ಕೆ ಕಾಡಾನೆ ದಾಳಿ: 2ಲಕ್ಷ ಮೌಲ್ಯದ ಬೆಳೆ ಹಾನಿ
ಬಾಳೆ, ಪರಂಗಿ ಹಾಗೂ ಮಾವಿನ ಗಿಡಗಳನ್ನು ನಾಶ ಮಾಡಿವೆ. ಕೊಯ್ಲಿಗೆ ಬಂದಿದ್ದ ಪಪ್ಪಾಯಿ ಹಾಗೂ ಬಾಳೆ ಸಂಪೂರ್ಣ ನಾಶವಾಗಿವೆ. ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ರೈತನಿಗೆ ಪರಿಹಾರದ ಭರವಸೆ ನೀಡಿದ್ದಾರೆ.