ಕರ್ನಾಟಕ

karnataka

ETV Bharat / state

ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ: ಶೀಳನೆರೆ ಗ್ರಾಮದಲ್ಲಿ ಮಂಡ್ಯ ಡಿಸಿ ಗ್ರಾಮ ವಾಸ್ತವ್ಯ - ಎಸ್.ಅಶ್ವಥಿ ಗ್ರಾಮ ವಾಸ್ತವ್ಯ

ಸರ್ಕಾರದ ಆದೇಶದಂತೆ ಕೆ.ಆರ್. ಪೇಟೆ ತಾಲೂಕಿನ ಶೀಳನೆರೆ ಗ್ರಾಮದಲ್ಲಿ 'ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ' ಎಂಬ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಎಸ್.ಅಶ್ವಥಿ ಚಾಲನೆ ನೀಡಿದರು.

District Collector S. Ashwathi village stay
ಶೀಳನೆರೆ ಗ್ರಾಮದಲ್ಲಿ ಮಂಡ್ಯ ಡಿಸಿ ಗ್ರಾಮ ವಾಸ್ತವ್ಯ

By

Published : Feb 20, 2021, 1:28 PM IST

ಮಂಡ್ಯ:ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಶೀಳನೆರೆ ಗ್ರಾಮದಲ್ಲಿ ಜಿಲ್ಲಾಧಿಕಾರಿ ಎಸ್.ಅಶ್ವಥಿ ಗ್ರಾಮ ವಾಸ್ತವ್ಯ ಹೂಡಿ, ಜಿಲ್ಲೆಯ ಆಡಳಿತವನ್ನು ಜನರ ಬಳಿ ಕೊಂಡೊಯ್ಯಲು ಮುಂದಾಗಿದ್ದಾರೆ.

ಶೀಳನೆರೆ ಗ್ರಾಮದಲ್ಲಿ ಮಂಡ್ಯ ಡಿಸಿ ಗ್ರಾಮ ವಾಸ್ತವ್ಯ

ಕಂದಾಯ ಸಚಿವರ ನಿರ್ದೇಶನದಂತೆ ಪ್ರತಿ ತಿಂಗಳ ಮೂರನೇ ಶನಿವಾರದಂದು ಜಿಲ್ಲಾಧಿಕಾರಿ ಸೇರಿದಂತೆ ಎಲ್ಲ ಅಧಿಕಾರಿಗಳು ಕಡ್ಡಾಯವಾಗಿ ಗ್ರಾಮಗಳಿಗೆ ಭೇಟಿ ನೀಡಬೇಕಾಗಿದೆ. ಸರ್ಕಾರದ ಆದೇಶದಂತೆ ಶೀಳನೆರೆ ಗ್ರಾಮದಲ್ಲಿ 'ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ' ಎಂಬ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.

ಓದಿ:ಮಾಜಿ ಸಿಎಂಗಳಿಬ್ಬರಿಗೂ ರಾಮ ಮಂದಿರ ವಿಚಾರದಲ್ಲಿ ಲೆಕ್ಕ ಕೇಳುವ ಅಧಿಕಾರವಿಲ್ಲ: ಕೆ.ಎಸ್​.ಈಶ್ವರಪ್ಪ

ಒಂದು ದಿನದ ಮುಂಚೆಯೇ ಗ್ರಾಮ ವಾಸ್ತವ್ಯ ಹೂಡಿರುವ ಡಿಸಿ ಅಶ್ವಥಿ, ಶೀಳನೆರೆ ಗ್ರಾಮದ ಅರಳಿಕಟ್ಟೆ ಬಳಿ ಗ್ರಾಮದ ಮುಖಂಡರೊಂದಿಗೆ ಚರ್ಚೆ ನಡೆಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗಿಯಾದರು.

ABOUT THE AUTHOR

...view details