ಕರ್ನಾಟಕ

karnataka

ETV Bharat / state

ರೆಬೆಲ್ ಶಾಸಕರಿಗೆ ತಾತ್ಕಾಲಿಕ ರಿಲೀಫ್: ನಾರಾಯಣಗೌಡ ಬೆಂಬಲಿಗರಿಂದ ಸಂಭ್ರಮ - ಅನರ್ಹ ಶಾಸಕ ನಾರಾಯಣ ಗೌಡ

ಉಪಚುನಾವಣೆಗೆ ಸುಪ್ರೀಂಕೋರ್ಟ್​ ಬೇಕ್​ ಹಾಕಿದ ಹಿನ್ನೆಲೆಯಲ್ಲಿ ಕೆ.ಆರ್.ಪೇಟೆ ಅನರ್ಹ ಶಾಸಕ ನಾರಾಯಣಗೌಡ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

ನಾರಾಯಣಗೌಡ ಬೆಂಬಲಿಗರಿಂದ ಸಂಭ್ರಮ

By

Published : Sep 26, 2019, 7:44 PM IST

ಮಂಡ್ಯ:ಸುಪ್ರೀಂಕೋರ್ಟ್, ಅನರ್ಹ ಶಾಸಕರ ಕ್ಷೇತ್ರಗಳ ಉಪಚುನಾವಣೆಗೆ ತಡೆನೀಡಿದ ಹಿನ್ನೆಲೆಯಲ್ಲಿ ಅನರ್ಹ ಶಾಸಕ ನಾರಾಯಣ ಗೌಡ ಬೆಂಬಲಿಗರು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

ಅನರ್ಹ ಶಾಸಕ ನಾರಾಯಣಗೌಡ ಬೆಂಬಲಿಗರಿಂದ ಸಂಭ್ರಮ

ಕೆ.ಆರ್.ಪೇಟೆಯಲ್ಲಿರುವ ಅನರ್ಹ ಶಾಸಕ ನಾರಾಯಣಗೌಡ ಅವರ ಮನೆ ಬಳಿ ಪಟಾಕಿ ಸಿಡಿಸಿದ ಅಭಿಮಾನಿಗಳು, ಸಿಹಿ ಹಂಚಿ ಸಂಭ್ರಮಿಸಿದರು. ಅಭಿಮಾನಿಗಳ ಸಂಭ್ರಮದಲ್ಲಿ ಪಾಲ್ಗೊಂಡ ಅನರ್ಹ ಶಾಸಕ ನಾರಾಯಣಗೌಡ ಮಾಧ್ಯಮಗಳ ಜೊತೆ ಮಾತನಾಡಿ, ನಮಗೆ ನ್ಯಾಯ ಸಿಕ್ಕಿದೆ, ಮುಂದೆಯೂ ಸಿಗಲಿದೆ. ನಾವು ಇನ್ನೂ ಶಾಸಕರೆ, ಚುನಾವಣೆ ಬರೋದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ABOUT THE AUTHOR

...view details