ಕರ್ನಾಟಕ

karnataka

ETV Bharat / state

ಗೆದ್ದ ಅಭ್ಯರ್ಥಿ, ಬೆಂಬಲಿಗರ ಮೇಲೆ ಸೋತ ಅಭ್ಯರ್ಥಿಗಳಿಂದ ಹಲ್ಲೆ ಆರೋಪ - Mandya

ಕಾಡೇನಹಳ್ಳಿ ಗ್ರಾಮದ ಮನ್ಮುಲ್ ನಿರ್ದೇಶಕ ರಾಮಚಂದ್ರ, ಪುತ್ರ ರವಿ ಹಾಗೂ ಬೆಂಗಲಿಗರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗ್ತಿದೆ.

mandya
ರಾಮಚಂದ್ರ ಹಲ್ಲೆಗೊಳಗಾದವರು

By

Published : Dec 31, 2020, 2:35 PM IST

ಮಂಡ್ಯ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳು ಗೆದ್ದ ಅಭ್ಯರ್ಥಿ ಹಾಗೂ ಬೆಂಬಲಿಗರ ಮೇಲೆ ಹಲ್ಲೆ ನಡೆಸಿರುವ ಘಟನೆ ಪಾಂಡವಪುರ ತಾಲೂಕಿನ ಮೇಲುಕೋಟೆ ಸಮೀಪದ ಕಾಡೇನಹಳ್ಳಿ ಬಳಿ ತಡರಾತ್ರಿ ನಡೆದಿದೆ.

ಹಲ್ಲೆಗೊಳಗಾದ ರಾಮಚಂದ್ರ

ಕಾಡೇನಹಳ್ಳಿ ಗ್ರಾಮದ ಮನ್ಮುಲ್ ನಿರ್ದೇಶಕ ರಾಮಚಂದ್ರ, ಪುತ್ರ ರವಿ ಹಾಗೂ ಇವರ ಬೆಂಗಲಿಗರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗ್ತಿದೆ. ಘಟನೆಯಲ್ಲಿ 8 ಮಂದಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗ್ರಾ.ಪಂ. ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಾದ ಸ್ವಾಮೀಗೌಡ ಮತ್ತು ಗೀತಾ ಗೆಲುವು ಸಾಧಿಸಿದದರು. ಇವರ ಗೆಲುವಿಗಾಗಿ ಮನ್ಮುಲ್ ನಿರ್ದೇಶಕ ರಾಮಚಂದ್ರ ಸೇರಿ ಬೆಂಬಲಿಗರು ಕೆಲಸ ಮಾಡಿದ್ದರು. ಈಗಾಗಿ ಇವರ ವಿರುದ್ದ ಸೋತ ಅಭ್ಯರ್ಥಿಗಳ ಸಂಬಂಧಿಕರು ಮತ್ತು ಬೆಂಬಲಿಗರಿಂದ ಹಲ್ಲೆ‌ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಸದ್ಯ ಗ್ರಾಮದಲ್ಲಿ ಬಿಗುವಿನ ವಾತಾವರಣವಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ. ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.

ABOUT THE AUTHOR

...view details