ಕರ್ನಾಟಕ

karnataka

By

Published : Apr 13, 2019, 4:53 PM IST

ETV Bharat / state

ಎತ್ತಿನ ಗಾಡಿ ಓಡಿಸಿದ ದಚ್ಚು-ಯಶ್​​... ಯೋಧನೊಂದಿಗೆ 'ಡಿಬಾಸ್'​ ವಿಡಿಯೋ ಕಾಲ್​​​

ಎತ್ತಿನ ಗಾಡಿ ಓಡಿಸಿ ಜೋಡೆತ್ತು ಎಂದು ಕರೆದಿದ್ದವರಿಗೆ ಯಶ್ - ದರ್ಶನ್ ತಿರುಗೇಟು. ಮಂಡ್ಯದಲ್ಲಿ ಸುಮಲತಾ ಅಂಬರೀಶ್​ ಪರ ಮತಯಾಚನೆ. ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೋಧನೊಬ್ಬನ ಜೊತೆ ವಿಡಿಯೋ ಕಾಲ್ ಮಾಡಿ ಮಾತನಾಡಿಸಿ ಕುಶಲೋಪರಿ ವಿಚಾರಿಸಿದ ದಚ್ಚು.

ಎತ್ತಿನ ಗಾಡಿ ಓಡಿಸುತ್ತಿರುವ ದರ್ಶನ್​-ಯಶ್​

ಮಂಡ್ಯ: ರಾಜಕೀಯ ನಾಯಕರಿಂದ ಜೋಡೆತ್ತು ಎಂದು ಟೀಕಿಸಿಕೊಂಡಿದ್ದ ಯಶ್ ಹಾಗೂ ದರ್ಶನ್ ಎತ್ತಿನ ಗಾಡಿ ಓಡಿಸುವ ಮೂಲಕ ರೈತರ, ಮತದಾರರ ಗಮನ ಸೆಳೆದರು.

ಮಂಡ್ಯದ ಇಂಡುವಾಳು ಗ್ರಾಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಮದ್ದೂರು ತಾಲೂಕಿನ ಅಬಲವಾಡಿ ಗ್ರಾಮದಲ್ಲಿ ರಾಕಿಂಗ್​ ಸ್ಟಾರ್​ ಯಶ್ ಎತ್ತಿನ ಗಾಡಿ ಓಡಿಸಿ ಸುಮಲತಾ ಅಂಬರೀಶ್​ ಪರ ಮತಯಾಚನೆ ಮಾಡಿದರು. ಅಲ್ಲದೇ ಈ ಮೂಲಕ ಜೋಡೆತ್ತು ಎಂದು ಕರೆದಿದ್ದ ಟೀಕಾಕಾರರಿಗೆ ಉತ್ತರ ನೀಡಿದರು‌.

ಎತ್ತಿನ ಗಾಡಿ ಓಡಿಸುತ್ತಿರುವ ದರ್ಶನ್​-ಯಶ್​

ಸೈನಿಕನ ಜೊತೆ ವಿಡಿಯೋ ಕಾಲ್:

ನಟ ದರ್ಶನ್ ಊಟದ ವೇಳೆಯಲ್ಲಿ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೋಧನೊಬ್ಬನ ಜೊತೆ ವಿಡಿಯೋ ಕಾಲ್ ಮಾಡಿ ಮಾತನಾಡಿಸಿ ಕುಶಲೋಪರಿ ವಿಚಾರಿಸಿದರು‌.
ಈ ವೇಳೆ ಸೈನಿಕ, ಸಿಎಂ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಬೇಸರ ವ್ಯಕ್ತಪಡಿಸಿ, ದರ್ಶನ್ ಪ್ರಚಾರಕ್ಕೆ ಹಾಗೂ ಸುಮಲತಾ ಅಂಬರೀಶ್ ಗೆಲುವಿಗೆ ಶುಭ ಹಾರೈಸಿದರು.

For All Latest Updates

ABOUT THE AUTHOR

...view details