ಕರ್ನಾಟಕ

karnataka

By

Published : Apr 16, 2019, 9:03 PM IST

ETV Bharat / state

ಹೆಚ್​ಡಿಕೆ ಒಂದು ಲೋಟ ಹಾಲು ಕರೆಯಲಿ... ಸಿಎಂಗೆ ಸವಾಲು ಹಾಕಿದ ದಚ್ಚು...

ಜೊಡೆತ್ತು, ಹಸು, ನಾಯಿ ಬೆಲೆ ಎಷ್ಟು ಒಂದು ಮತಕ್ಕೆ ಕೊಡ್ತಿರೋ ಹಣ ಎಷ್ಟು‌. 150 ಕೋಟಿ ಅಂತಾರೆ ಯಾರಪ್ಪಾನ ಮನೆ ಸ್ವತ್ತು ಅದು. ರೈತನ ಮಗ ಅಂತಾರಲ್ಲ ಒಂದು ಲೋಟ ಹಾಲು ಕರೆಯೊಕೆ ಹೇಳಿ ಆಗ ರೈತರ ಮಗ ಅಂತಾ ಒಪ್ಪಿಕೊಳ್ತೀನಿ ಎಂದು ಸವಾಲು ಹಾಕಿದರು.

ಒಂದು ಲೋಟ ಹಾಲು ಕರೆಯಲಿ ಎಂದು ಸಿಎಂಗೆ ಸವಾಲು ಹಾಕಿದ ದಚ್ಚು

ಮಂಡ್ಯ: ಅವರು 60 ಕೋಟಿ ಖರ್ಚು ಮಾಡಿ ಸಿನಿಮಾ ಮಾಡ್ತಾರಲ್ಲ. ಆ ದುಡ್ಡಲ್ಲಿ ಜಿಲ್ಲೆಯಲ್ಲಿ ಒಂದೊಳ್ಳೆ ಕೆಲಸ ಮಾಡಲಿ. ಅವರು ಕೊಟ್ಟ ಅನುದಾನ ನನ್ನ ಕೈಗೆ ನೀಡಲಿ, ಅಭಿವೃದ್ಧಿ ಎಂದರೆ ಏನು ಅನ್ನೋದನ್ನ ನಾ‌ನು ಮಾಡಿ ತೋರಿಸುತ್ತೇನೆ ಎಂದು ನಟ ದರ್ಶನ್ ಸಿಎಂ ಕುಮಾರಸ್ವಾಮಿ ಗೆ ತಿರುಗೇಟು ನೀಡಿದರು‌.

ಸಿಎಂಗೆ ಸವಾಲು ಹಾಕಿದ ದಚ್ಚು

ಮಂಡ್ಯದಲ್ಲಿ ಮಾತನಾಡಿದ ಅವರು, ನನ್ನಂಥ ಕಚಡಾ ನನ್ನ ಮಗ ಯಾರೂ ಇಲ್ಲ. ನನಗೂ ಎರಡು ಮುಖ, ಇಷ್ಟವಾದ್ರೆ ಆಯ್ತು ಇಲ್ಲ ಅಂದ್ರೆ ಇಲ್ಲ ಅಂತಾರೆ. ನಾನು ಅಮ್ಮನಿಗೋಸ್ಕರ ಇಷ್ಟು ದಿನ ಸುಮ್ಮನಿದ್ದೆ ಎಂದು ಎಚ್ಚರಿಕೆ ನೀಡಿದರು.

ಐಟಿ ರೇಡ್ ವಿಚಾರವಾಗಿ ಖಾಸಗಿ ವಾಹಿನಿಗೆ ಟಾಂಗ್ ನೀಡಿ, ಹೌದು, ಐಟಿ ರೇಡ್ ಆಗಿತ್ತು, ಒಂದು ಡೈರಿ ಇತ್ತು ಅದ್ರಲ್ಲಿ ಎಷ್ಟು ಹಾಲು ಹಾಕ್ತೀವಿ ಅಂತಾ ಬರೆದಿತ್ತು ಎಂದರು.
ಅಮ್ಮನ ಜೊತೆ ಜೊಡೆತ್ತು ತರಹ ನಿಂತಿದ್ದೀವಿ ಕಣಯ್ಯಾ,ಇವಾಗ ಏನಯ್ಯಾ. ನಾನು ರೇಪ್ ಮಾಡಿದ್ದೀವಾ ಕಳ್ಳತನ ಮಾಡಿದ್ದೀವಾ ಏನ್ ಮಾಡಿದ್ದೀವಿ. ನೀನೂ ನಿರ್ಮಾಪಕ ಆಗಿದ್ದಿಯಾ ವೃದ್ದಾಶ್ರಮ,ಅನಾಥಶ್ರಮ ಮಾಡಿದ್ರೆ ಜನರೇ ನಿಮ್ಮನ್ನು ಗೆಲ್ಲಿಸುತ್ತಿದ್ರು ಎಂದರು.

ನಾವೂ ಪರೇಡ್ ಮಾಡ್ತೀವಿ ಅಂತಾ ಅದೇ ರೀತಿ ಪರೇಡ್ ಮಾಡಿದ್ದಿವಿ. ಎರಡು ದಿನ ದಯವಿಟ್ಟು ಬೂತ್ ನಲ್ಲಿ ಕೆಲ್ಸ ಮಾಡಿ ಅಂತಾ ಅಭಿಮಾನಿಗಳಿಗೆ ಕರೆ ನೀಡಿದರು.
ಅಮ್ಮ ಗೆದ್ರೆ ಇಡೀ ವರ್ಲ್ಡ್ ನಲ್ಲಿ ಮಂಡ್ಯ ಏನು ಅಂತಾ ಗೊತ್ತಾಗುತ್ತೆ. ಜೊಡೆತ್ತು, ಹಸು, ನಾಯಿ ಬೆಲೆ ಎಷ್ಟು ಒಂದು ಮತಕ್ಕೆ ಕೊಡ್ತಿರೋ ಹಣ ಎಷ್ಟು‌. 150 ಕೋಟಿ ಅಂತಾರೆ ಯಾರಪ್ಪಾನ ಮನೆ ಸ್ವತ್ತು ಅದು. ರೈತನ ಮಗ ಅಂತಾರಲ್ಲ ಒಂದು ಲೋಟ ಹಾಲು ಕರೆಯೊಕೆ ಹೇಳಿ ಆಗ ರೈತರ ಮಗ ಅಂತಾ ಒಪ್ಪಿಕೊಳ್ತೀನಿ ಎಂದು ಸವಾಲು ಹಾಕಿದರು.

ನನಗೆ ವರ್ಷಕ್ಕೆ ಎರಡೂವರೆ ಕೋಟಿ ರೂಪಾಯಿಯಲ್ಲಿ ವಿದ್ಯಾದಾನ ಸೇರಿದಂತೆ ಜನರ ಸೇವೆ ಮಾಡ್ತಾ ಇದ್ದಿನಿ. ಅವರು ಖರ್ಚು ಮಾಡ್ತಾರಲ್ಲ ಅನುದಾನ ನಮಗೆ ಕೊಡಲಿ ಕೆಲಸ ಮಾಡೋದು ಹೇಗೆ ಅಂತಾ ತೋರಿಸ್ತೀನಿ ಎಂದು ಸವಾಲು ಹಾಕಿದರು.

For All Latest Updates

ABOUT THE AUTHOR

...view details