ಕರ್ನಾಟಕ

karnataka

ETV Bharat / state

ಬೀದರ್​, ಮಂಡ್ಯ, ಕೋಲಾರದಲ್ಲಿ ಕೊರೊನಾ ಲಸಿಕೆ ಪಡೆದ ಜಿಲ್ಲಾಧಿಕಾರಿಗಳು - Bidar dc

ದೇಶಾದ್ಯಂತ ಎರಡನೇ ಹಂತದ ಕೋವಿಡ್​-19 ವಿರುದ್ಧ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಯಶಸ್ವಿಯಾಗಿ ನಡೆಯುತ್ತಿದ್ದು, ಅಧಿಕಾರಿಗಳು ಸಹ ಲಸಿಕೆ ಪಡೆಯುತ್ತಿದ್ದಾರೆ.

Coroner  vaccina to  Bidar, Mandya, Kolar  DC
ಬೀದರ್​,ಮಂಡ್ಯ, ಕೋಲಾರದಲ್ಲಿ ಕೊರೊನಾ ಲಸಿಕೆ ಪಡೆದ ಜಿಲ್ಲಾಧಿಕಾರಿಗಳು

By

Published : Feb 8, 2021, 11:47 PM IST

ಬೀದರ್/ಕೋಲಾರ/ ಮಂಡ್ಯ: ಎರಡನೇ ಹಂತದ ಕೊರೊನಾ ಲಸಿಕಾ ಅಭಿಯಾನಕ್ಕೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಚಾಲನೆ ನೀಡಲಾಗಿದ್ದು, ಬೀದರ್, ಕೋಲಾರ ಮತ್ತು ಮಂಡ್ಯ ಜಿಲ್ಲಾಧಿಕಾರಿಗಳು ಲಸಿಕೆ ಪಡೆದುಕೊಂಡಿದ್ದಾರೆ.

ಬೀದರ್​ ಜಿಲ್ಲಾಧಿಕಾರಿ ಆರ್​ ರಾಮಚಂದ್ರನ್ ಅವರು ಕೋವಿಶಿಲ್ಡ್ ಲಸಿಕೆ ಪಡೆದುಕೊಂಡರು. ಮಂಗಲಪೇಟದಲ್ಲಿ ಇರುವ ಪೊಲೀಸ್ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ವಿ.ಜಿ ರೆಡ್ಡಿ ಲಸಿಕೆ ಹಾಕಿಸಿಕೊಂಡರು.

ಕೋಲಾರ ಜಿಲ್ಲಾಧಿಕಾರಿ ಸತ್ಯಭಾಮ ಅವರು ಜಿಲ್ಲಾಸ್ಪತ್ರೆಯಲ್ಲಿ ಲಸಿಕೆ ಹಾಕಿಸಿಕೊಂಡು ಬಳಿಕ ಮಾತನಾಡಿದ ಅವರು, ಮೊದಲಿಗೆ ಲಸಿಕೆ ಕುರಿತು ಆತಂಕ, ಭಯ ಇತ್ತು. ಆದರೆ, ಈಗ ಅಂತಹ ಯಾವುದೇ ವಾತಾವರಣ ಇಲ್ಲ. ಜಿಲ್ಲೆಯಲ್ಲಿ ಯಶಸ್ವಿಯಾಗಿ ಲಸಿಕೆ ಹಾಕುವ ಕಾರ್ಯ ನಡೆಯುತ್ತಿದೆ ಎಂದರು.

ರಾಜ್ಯದಲ್ಲಿ ಎರಡನೇ ಹಂತದ ಲಸಿಕೆ ವಿತರಣೆ

ಎರಡನೇ ಹಂತದ ಲಸಿಕೆ ವಿತರಣೆ ವೇಳೆ ಮಂಡ್ಯದ ಮಿಮ್ಸ್ ಕಾಲೇಜಿನಲ್ಲಿ ಡಿಸಿ ವೆಂಕಟೇಶ್, ಎಸ್​ಪಿ ಪರಶುರಾಮ್, ತಹಶಿಲ್ದಾರ್ ಚಂದ್ರಶೇಖರ್ ಸಂಗಾಳಿ, ಜಿ.ಪಂ. ಸಿಇಒ ಜುಲ್ಫಿಕರ್ ಉಲ್ಲಾ ಅವರು ಸಹ ಲಸಿಕೆ ಪಡೆದುಕೊಂಡರು.

ABOUT THE AUTHOR

...view details