ಕರ್ನಾಟಕ

karnataka

By

Published : Dec 12, 2019, 5:26 PM IST

ETV Bharat / state

ಒಂದಲ್ಲ, ಎರಡು ಸಾರಿ ಬಿಎಸ್​ವೈ ಕಾಲಿಗೆ ಬಿದ್ದ ಜೆಡಿಎಸ್ ಶಾಸಕ ಸುರೇಶ್​ಗೌಡ... ಕಾರಣ ಕೇಳಿದ್ರೆ ಹೀಗಂತಾರೆ

ನಾಗಮಂಗಲದ ಆದಿಚುಂಚನಗಿರಿ ಮಠಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರ ಕಾಲಿಗೆ ಶಾಸಕ ಕೆ.ಸುರೇಶ್​ಗೌಡ ಅವರು ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡರು.

CM yadiyurappa visit the Adichunchanagiri matt
ಸಿಎಂ ಕಾಲಿಗೆ ಬಿದ್ದ ಜೆಡಿಎಸ್ ಶಾಸಕ

ಮಂಡ್ಯ:ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಠಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರನ್ನು ಸ್ವಾಗತ ಕೋರುವ ಹಾಗೂ ಅಲ್ಲಿಂದ ತೆರಳುವ ಸಂದರ್ಭದಲ್ಲಿ ಕ್ಷೇತ್ರದ ಜೆಡಿಎಸ್ ಶಾಸಕ ಕೆ.ಸುರೇಶ್​ಗೌಡ ಅವರು ಎರಡು ಬಾರಿ ಬಿಎಸ್​ವೈ ಕಾಲಿಗೆ ನಮಸ್ಕರಿಸಿದ್ದು, ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿದ ಸುರೇಶ್​​ಗೌಡ ಅವರು, ಯಡಿಯೂರಪ್ಪ ಹಿರಿಯರು, ತಂದೆ ಸಮಾನ. ಹೀಗಾಗಿ ಆಶೀರ್ವಾದ ಪಡೆದಿದ್ದೇನೆ. ಅವರ ಜಾಗದಲ್ಲಿ ಸಿದ್ದರಾಮಯ್ಯ ಬಂದಿದ್ದರೂ, ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಿದ್ದೆ ಎಂದು ಸ್ಪಷ್ಟಪಡಿಸಿದರು.

ಜೆಡಿಎಸ್ ಶಾಸಕ ಕೆ.ಸುರೇಶ್​ಗೌಡ

ನಾನು ಪಕ್ಷ ಬಿಟ್ಟು ಹೋಗುವ ಮಾತೇ ಇಲ್ಲ. ಈ ಹಿಂದೆ ಬಿಜೆಪಿಯಿಂದ ನನಗೆ ಆಫರ್ ಬಂದಿತ್ತು ಎಂದಿದ್ದೆ. ಈಗ ಅವರಿಗೆ ಯಾರ ಅವಶ್ಯಕತೆಯೂ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವಯಕ್ತಿಕವಾಗಿ ನಾರಾಯಣಗೌಡ ನಾನು ಸ್ನೇಹಿತರು. ಉಪಚುನಾವಣೆಯಲ್ಲಿ ಅವರ ವಿರುದ್ಧ ಪ್ರಚಾರ ನಡೆಸಿದ್ದೇನೆ. ಕೆ.ಆರ್.ಪೇಟೆಯಲ್ಲಿ ಜೆಡಿಎಸ್‌ ಎರಡನೇ ಸ್ಥಾನಕ್ಕೆ ಬಂದಿದೆ. ಕಾಂಗ್ರೆಸ್ ಸ್ಥಿತಿ ಅಧೋಗತಿಯಾಗಿದೆ. ಜೆಡಿಎಸ್​​ನಲ್ಲಿ ಯಾವುದೇ ನೋವಿಲ್ಲ. ಪಕ್ಷ ಬಿಡುವ ಮಾತಿಲ್ಲ. ಅವೆಲ್ಲ ಊಹಾಪೋಹಗಳು ಎಂದು ಆರೋಪಗಳಿಗೆ ಅಲ್ಲಗಳೆದರು.

ಉಪಚುನಾವಣೆ ನಂತರ ಬಿಎಸ್​​ವೈ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ಕಾಲಭೈರವನ ಆಶೀರ್ವಾದ ಪಡೆದುಕೊಂಡರು. ಪೂಜೆ ನಂತರ ಆದಿ ಚುಂಚನಗಿರಿ ಶಿಕ್ಷಣ ಟ್ರಸ್ಟ್​​​ನ ಶಿಕ್ಷಣ ಸಂಸ್ಥೆಗಳ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಅಲ್ಲದೆ, ಕ್ರೀಡಾಳುಗಳಿಗೆ ಶುಭಕೋರಿದರು. ಮಠದ ನಿರ್ಮಲಾನಂದ ಸ್ವಾಮೀಜಿ, ಕಂದಾಯ ಸಚಿವ ಅಶೋಕ್ ಇದ್ದರು.

ABOUT THE AUTHOR

...view details