ಕರ್ನಾಟಕ

karnataka

ETV Bharat / state

ಬಾಗಿಲು ಮುಚ್ಚಿದೆ ಬಿಎಸ್​ವೈ ಕನಸಿನ ಕೂಸು... ಮರು ಜೀವ ಪಡೆಯುತ್ತಾ ಕಬ್ಬಿನ ತಳಿ ಸಂಶೋಧನ ಕೇಂದ್ರ? - ಮಂಡ್ಯ, ಮುಖ್ಯಮಂತ್ರಿ ಯಡಿಯೂರಪ್ಪನವರ ಕನಸಿನ ಕೂಸು, ಮಂಡ್ಯ ಜಿಲ್ಲೆಯ ಸರ್ ಎಂ. ವಿಶ್ವೇಶ್ವರಯ್ಯ ಕಬ್ಬು ಸಂಶೋಧನಾ ಕೇಂದ್ರ, ಸರ್ಕಾರದ ನಿರ್ಲಕ್ಷ್ಯ, ಬಾಗಿಲು ಮುಚ್ಚಿದೆ.  ಸಂಸ್ಥೆಗೆ ಮರುಜೀವ ನೀಡುವ ಜೊತೆಗೆ, ಹೊಸ ತಳಿಗಳ ಸಂಶೋಧ

ಬಿ.ಎಸ್ ಯಡಿಯೂರಪ್ಪ ಈ ಹಿಂದೆಯೂ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಮುತುವರ್ಜಿ ವಹಿಸಿ ನಿರ್ಮಾಣ ಮಾಡಿದ್ದ ಮಂಡ್ಯದ ಸರ್ ಎಂ. ವಿಶ್ವೇಶ್ವರಯ್ಯ ಕಬ್ಬು ಸಂಶೋಧನಾ ಕೇಂದ್ರ ಸರ್ಕಾರದ ನಿರ್ಲಕ್ಷ್ಯಕ್ಕೊಳಗಾಗಿ ಮುಚ್ಚಲ್ಪಟ್ಟಿದೆ. ಈಗ ಮತ್ತೆ ಯಡಿಯೂರಪ್ಪ ರಾಜ್ಯದ ಚುಕ್ಕಾಣಿ ಹಿಡಿದಿದ್ದು, ಕಬ್ಬು ಸಂಶೋಧನ ಕೇಂದ್ರಕ್ಕೆ ಮರು ಜೀವ ದೊರಕುವ ಭರವಸೆಯಲ್ಲಿದ್ದಾರೆ ಜಿಲ್ಲೆಯ ಕಬ್ಬು ಬೆಳೆಗಾರರು.

ಮುಚ್ಚಿದ ಸಿಎಂ ಯಡಿಯೂರಪ್ಪ ಕನಸಿನ ಕೂಸು; ಸಂಶೋಧನೆ ಆಗಲೇ ಇಲ್ಲ ಕಬ್ಬಿನ ತಳಿ

By

Published : Aug 3, 2019, 4:55 AM IST

ಮಂಡ್ಯ: ಮುಖ್ಯಮಂತ್ರಿ ಯಡಿಯೂರಪ್ಪನವರ ಕನಸಿನ ಕೂಸಾದ ಮಂಡ್ಯ ಜಿಲ್ಲೆಯ ಸರ್ ಎಂ. ವಿಶ್ವೇಶ್ವರಯ್ಯ ಕಬ್ಬು ಸಂಶೋಧನಾ ಕೇಂದ್ರ ಸರ್ಕಾರದ ನಿರ್ಲಕ್ಷ್ಯಕ್ಕೊಳಗಾಗಿ ಉಪಯೋಗಕ್ಕೆ ಬಾರದಂತಾಗಿದೆ.

ಮಂಡ್ಯದ ಹೊರ ವಲಯದಲ್ಲಿರುವ ಈ ಕೇಂದ್ರವನ್ನು ಅಂದು ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಘೋಷಣೆ ಮಾಡಿ, ಉದ್ಘಾಟನೆ ಮಾಡಿದ್ದರು. ಆದರೆ ಈ ಸಂಶೋಧನಾ ಸಂಸ್ಥೆ ಸರಿಯಾದ ನಿರ್ವಹಣೆ ಇಲ್ಲದೆ ಈಗ ಬಾಗಿಲು ಮುಚ್ಚಿದೆ. ಒಂದೆರಡು ಬಾರಿ ಮಾತ್ರ ರೈತರಿಗೆ ತರಬೇತಿ ನೀಡಿದ್ದು ಬಿಟ್ಟರೆ ಸಮಸ್ಥೆಯಿಂದ ಯಾವುದೇ ಉಪಯೋಗ ಆಗಿಲ್ಲ. ಸಂಶೋಧನಾ ಸಂಸ್ಥೆ ಆರಂಭಕ್ಕೆ ಸರ್ಕಾರ 5 ಕೋಟಿ ರೂಪಾಯಿಗಳನ್ನು ವ್ಯಯಿಸಿತ್ತು. ಆದರೆ ಪೂರ್ಣ ಪ್ರಮಾಣದ ನಿರ್ದೇಶಕರ ನೇಮಕಾತಿ ನಡೆಯಲಿಲ್ಲ. ಕೇಂದ್ರ ಆರಂಭವಾಗಿ ಸುಮಾರು 8 ವರ್ಷಗಳೇ ಕಳೆದಿದೆ. ಆದರೆ ಇದುವರೆಗೆ ನಿರ್ದೇಶಕರು ಇರಲಿ ಪೂರ್ಣ ಪ್ರಮಾಣದ ನೌಕರರ ನೇಮಕಾತಿಯೇ ನಡೆದಿಲ್ಲ.

ಮುಚ್ಚಿದ ಸಿಎಂ ಯಡಿಯೂರಪ್ಪ ಕನಸಿನ ಕೂಸು: ಸಂಶೋಧನೆ ಆಗಲೇ ಇಲ್ಲ ಕಬ್ಬಿನ ತಳಿ

ದಕ್ಷಿಣ ಕರ್ನಾಟಕದ 16 ಕಬ್ಬಿನ ಕಾರ್ಖಾನೆಗಳು ಈ ಕೇಂದ್ರದ ವ್ಯಾಪ್ತಿಗೆ ಸೇರುತ್ತವೆ. ಪ್ರಸ್ತುತ ಸಂಸ್ಥೆಯಲ್ಲಿ 7 ಕೋಟಿ ರೂಪಾಯಷ್ಟು ಆದಾಯ ಇದೆ ಎಂದು ಹೇಳಲಾಗುತ್ತಿದೆ. ಆದರೆ ಆ ಹಣವೂ ರೈತರಿಗೆ ಉಪಯೋಗಕ್ಕೆ ಸಿಗುತ್ತಿಲ್ಲ. ವಿವಿಧ ಬಗೆಯ ಕಬ್ಬಿನ ತಳಿಯ ಸಂಶೋಧನೆ, ಸಕ್ಕರೆ ಉತ್ಪಾದನಾ ವಿಧಾನದ ಸುಧಾರಣೆ, ಕಂಡಸಾರಿ ಕಾರ್ಖಾನೆಗಳ ಸುಧಾರಣೆಯ ಸಂಶೋಧನೆಯನ್ನು ಮಾಡಬೇಕಾದ ಈ ಸಂಸ್ಥೆಯೇ ಸುಧಾರಣೆ ಆಗದೆ ಅತ್ತ ಕಡೆ ನೌಕರರು ಇಲ್ಲದೆ ಬಾಗಿಲು ಮುಚ್ಚಿದೆ.

ಈಗ ಮತ್ತೆ ಯಡಿಯೂರಪ್ಪ ಸಿಎಂ ಆಗಿದ್ದಾರೆ. ಅವರ ಕನಸಿನ ಕೂಸಾದ ಈ ಸಂಸ್ಥೆಗೆ ಮರುಜೀವ ನೀಡುವ ಜೊತೆಗೆ, ಹೊಸ ತಳಿಗಳ ಸಂಶೋಧನೆಯ ಭರವಸೆಯಲ್ಲಿದ್ದಾರೆ ಜಿಲ್ಲೆಯ ಕಬ್ಬು ಬೆಳೆಗಾರರು.

For All Latest Updates

ABOUT THE AUTHOR

...view details