ಮಂಡ್ಯ: ಮುಖ್ಯಮಂತ್ರಿ ಯಡಿಯೂರಪ್ಪನವರ ಕನಸಿನ ಕೂಸಾದ ಮಂಡ್ಯ ಜಿಲ್ಲೆಯ ಸರ್ ಎಂ. ವಿಶ್ವೇಶ್ವರಯ್ಯ ಕಬ್ಬು ಸಂಶೋಧನಾ ಕೇಂದ್ರ ಸರ್ಕಾರದ ನಿರ್ಲಕ್ಷ್ಯಕ್ಕೊಳಗಾಗಿ ಉಪಯೋಗಕ್ಕೆ ಬಾರದಂತಾಗಿದೆ.
ಮಂಡ್ಯದ ಹೊರ ವಲಯದಲ್ಲಿರುವ ಈ ಕೇಂದ್ರವನ್ನು ಅಂದು ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಘೋಷಣೆ ಮಾಡಿ, ಉದ್ಘಾಟನೆ ಮಾಡಿದ್ದರು. ಆದರೆ ಈ ಸಂಶೋಧನಾ ಸಂಸ್ಥೆ ಸರಿಯಾದ ನಿರ್ವಹಣೆ ಇಲ್ಲದೆ ಈಗ ಬಾಗಿಲು ಮುಚ್ಚಿದೆ. ಒಂದೆರಡು ಬಾರಿ ಮಾತ್ರ ರೈತರಿಗೆ ತರಬೇತಿ ನೀಡಿದ್ದು ಬಿಟ್ಟರೆ ಸಮಸ್ಥೆಯಿಂದ ಯಾವುದೇ ಉಪಯೋಗ ಆಗಿಲ್ಲ. ಸಂಶೋಧನಾ ಸಂಸ್ಥೆ ಆರಂಭಕ್ಕೆ ಸರ್ಕಾರ 5 ಕೋಟಿ ರೂಪಾಯಿಗಳನ್ನು ವ್ಯಯಿಸಿತ್ತು. ಆದರೆ ಪೂರ್ಣ ಪ್ರಮಾಣದ ನಿರ್ದೇಶಕರ ನೇಮಕಾತಿ ನಡೆಯಲಿಲ್ಲ. ಕೇಂದ್ರ ಆರಂಭವಾಗಿ ಸುಮಾರು 8 ವರ್ಷಗಳೇ ಕಳೆದಿದೆ. ಆದರೆ ಇದುವರೆಗೆ ನಿರ್ದೇಶಕರು ಇರಲಿ ಪೂರ್ಣ ಪ್ರಮಾಣದ ನೌಕರರ ನೇಮಕಾತಿಯೇ ನಡೆದಿಲ್ಲ.