ಕರ್ನಾಟಕ

karnataka

ETV Bharat / state

ಮಂಡ್ಯದ ಮನ್ಮುಲ್​ ನೀರು ಮಿಶ್ರಿತ ಹಾಲು ಹಗರಣ ಕೇಸ್: CID ತನಿಖೆ ಶುರು - ಸಿಐಡಿ ಇನ್​ಸ್ಪೆಕ್ಟರ್​​ ನರೇಂದ್ರ ಕುಮಾರ್

ನೀರು ಮಿಶ್ರಿತ ಹಾಲು ಹಗರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ಆರಂಭಿಸಿದ್ದು, ಮಂಡ್ಯದ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ತನಿಖೆ ನಡೆಸುತ್ತಿದೆ.

CID ತನಿಖೆ ಆರಂಭ!
CID ತನಿಖೆ ಆರಂಭ!

By

Published : Jul 15, 2021, 1:57 PM IST

ಮಂಡ್ಯ: ಜೂನ್ 14 ರಂದು ನಡೆದಿದ್ದ ನೀರು ಮಿಶ್ರಿತ ಹಾಲು ಹಗರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ಆರಂಭವಾಗಿದೆ. ಬೆಂಗಳೂರಿನ ಸಿಐಡಿ ಇನ್​ಸ್ಪೆಕ್ಟರ್​​ ನರೇಂದ್ರ ಕುಮಾರ್ ನೇತೃತ್ವದ ತಂಡ ಮದ್ದೂರು ಪೋಲೀಸ್ ಠಾಣೆಗೆ ಆಗಮಿಸಿ ಒಕ್ಕೂಟದ ಅಧಿಕಾರಿಗಳು ಮತ್ತು ಆರೋಪಿಗಳ ವಿರುದ್ಧ ನೀಡಿರುವ ದೂರಿನನ್ವಯ ದಾಖಲಾಗಿರುವ ಎಫ್​ಐಆರ್​ ಸೇರಿದಂತೆ ಕಡತಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ನಂತರ ಮದ್ದೂರು ತಾಲೂಕಿನ ಗೆಜ್ಜಲಗೆರೆ ಜಿಲ್ಲಾ ‌ಹಾಲು ಒಕ್ಕೂಟದ ಆಡಳಿತ ಕಚೇರಿಗೆ ಭೇಟಿ ನೀಡಿದ ತಂಡ, ವ್ಯವಸ್ಥಾಪಕ ನಿರ್ದೇಶಕ ಡಿ.ಅಶೋಕ್ ಅವರಿಂದ ಹಗರಣದ ಬಗ್ಗೆ ಮಾಹಿತಿ ಕಲೆ ಹಾಕಿದರು. ಅವರಿಂದ ಹಗರಣದ ಕೆಲವು ದಾಖಲಾತಿಗಳನ್ನು ಸಂಗ್ರಹಿಸಿಕೊಂಡು ಅಧಿಕೃತವಾಗಿ ತನಿಖೆ ಆರಂಭಿಸಿದ್ದಾರೆ.

ಹಾಲಿಗೆ ನೀರು ಮಿಶ್ರಿತ ಹಗರಣಕ್ಕೆ ಸಂಬಂಧಿಸಿದಂತೆ ಕೈಗೊಂಡಿರುವ ತನಿಖೆ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಲು ನಿರಾಕರಿಸಿದ ಸಿಐಡಿ ಇನ್​​ಸ್ಪೆಕ್ಟರ್​​ ನರೇಂದ್ರ ಕುಮಾರ್, ಈ ಹಗರಣ ಕುರಿತಂತೆ ಕೈಗೊಂಡಿರುವ ತನಿಖೆ ಬಗ್ಗೆ ವಿವರಣೆ ನೀಡುವುದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಇದಕ್ಕೆ ಹಿರಿಯ ಅಧಿಕಾರಿಗಳು ಉತ್ತರಿಸುತ್ತಾರೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ:ಸಿದ್ದರಾಮಯ್ಯ ಈ ನಾಡು ಕಂಡ ಮಹಾನ್ ಮೋಸಗಾರ: ಕಟೀಲು

ABOUT THE AUTHOR

...view details