ಮಂಡ್ಯ:ಜೀವನದಿ, ಸಕ್ಕರೆ ಜಿಲ್ಲೆಯ ಅನ್ನದಾತೆ ಕಾವೇರಿ ಒಡಲು ತುಂಬಿದ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಾಗಿನ ಅರ್ಪಿಸಿದ್ದಾರೆ.
ಶುಭಗಳಿಗೆಯಲ್ಲಿ ಕಂದಾಯ ಸಚಿವ ಅಶೋಕ್ ಜೊತೆ ಕೆಆರ್ಎಸ್ ಅಣೆಕಟ್ಟೆಗೆ ಆಗಮಿಸಿದ ಸಿಎಂ, ಕಾವೇರಿಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಣೆ ಮಾಡಿದರು.
ಅಣೆಕಟ್ಟೆ ತುಂಬಿ ಜಿಲ್ಲೆಯ ರೈತರಿಗೆ ಸುಭಿಕ್ಷೆಯ ಕಾಲವಿದು. ಹೀಗಾಗಿ ಸಿಎಂ ಯಡಿಯೂರಪ್ಪ ಕಾವೇರಿ ಮಾತೆಗೆ ಬಾಗಿನ ಅರ್ಪಣೆ ಮಾಡಿದರು. ಇದಕ್ಕೂ ಮೊದಲು ಪುರೋಹಿತರಾದ ಭಾನುಪ್ರಕಾಶ್ ಶರ್ಮಾರ ಮನೆಯಲ್ಲಿ ತಯಾರು ಮಾಡಿ ತಂದಿದ್ದ ಬಾಗಿನದ ಬುಟ್ಟಿಗೆ ಸಿಎಂ ಪೂಜೆ ಸಲ್ಲಿಸಿ ಕಾವೇರಿ ಮಾತೆಯಲ್ಲಿ ಹರಕೆ ಸಲ್ಲಿಸಿದರು.