ಮಂಡ್ಯ:ರಾಜ್ಯ ರಾಜಕಾರಣದ ಬೆಳವಣಿಗೆ ಹಾಗೂ ಶಾಸಕರ ರಾಜೀನಾಮೆ ಪ್ರಕರಣದ ನಿರ್ಧಾರವನ್ನು ರಾಷ್ಟ್ರಪತಿ ಹಾಗೂ ರಾಜ್ಯಪಾಲರು ಸಂವಿಧಾನತ್ಮಕವಾಗಿ ಪರಿಹರಿಸಲಿದ್ದಾರೆ ಎಂದುಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ತಿಳಿಸಿದ್ದಾರೆ.
ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ತುಂಬಾ ಸಮಯದಿಂದ ಅತೃಪ್ತಿ ಇತ್ತು. ಇದೀಗ ಬ್ಲಾಸ್ಟ್ ಆಗಿದೆ. ಕಾಂಗ್ರೆಸ್ ಶಾಸಕರಿಗೆ ನಾವು ಶಾಸಕರಾಗಿರುವುದಕ್ಕಿಂತ ರಾಜೀನಾಮೆ ನೀಡಿ ಸಾಮಾನ್ಯ ಮನುಷ್ಯರಾಗಿರೋಣ ಎನಿಸಿದೆ. ಶಾಸಕರಿಗೆ ಇಂತಹ ಸರ್ಕಾರ, ನಾಯಕರ ಜೊತೆ ಕೆಲಸ ಮಾಡುವುದು ಇಷ್ಟ ಇರಲಿಲ್ಲ. ಸರ್ಕಾರ ಸರಿಯಾಗುತ್ತೆ ಎಂಬ ಆಶಯ ಇತ್ತು. ಆದರೆ ಸರಿಯಾಗದ ಹಂತಕ್ಕೆ ಬಂದಿದ್ದರಿಂದ ಶಾಸಕರು ರಾಜೀನಾಮೆ ನೀಡಿದ್ದಾರೆ ಅಷ್ಟೇ. ರಾಜ್ಯಪಾಲರು ಏನು ಮಾಡುತ್ತಾರೋ ಕಾದು ನೋಡೋಣ ಎಂದರು.