ಕರ್ನಾಟಕ

karnataka

By

Published : Jul 27, 2019, 7:22 PM IST

ETV Bharat / state

ಆತನಿಗೆ ನನ್ನ ಆಯಸ್ಸನ್ನೇ ಧಾರೆ ಎರೆಯುತ್ತೀನಿ: ಬಿಎಸ್​ವೈ ಅತ್ತಿಗೆ ಶಾರದಮ್ಮ

ತಮ್ಮ ಹುಟ್ಟೂರಾದ ಮಂಡ್ಯ ಜಿಲ್ಲೆಯ ಬೂಕನಕೆರೆ ಗ್ರಾಮಕ್ಕೆ ಆಗಮಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರಿಗೆ ಅವರ ಅತ್ತಿಗೆ ಶಾರದಮ್ಮ, ನನ್ನ ಆಯಸ್ಸನ್ನೇ ಧಾರೆ ಎರೆಯುತ್ತೀನಿ. ಮುಂದಿನ‌ ದಿನಗಳಲ್ಲಿ ಅವರು ಮತ್ತಷ್ಟು ಅಭಿವೃದ್ಧಿ ಕಾರ್ಯ ಮಾಡಲಿ ಎಂದು ಶುಭಹಾರೈಸಿದರು.

ಬಿಎಸ್​ವೈಗೆ ಶುಭಹಾರೈಸಿದ ಕುಟುಂಬಸ್ಥರು

ಮಂಡ್ಯ: ಜಿಲ್ಲೆಯ ಬೂಕನಕೆರೆ ಗ್ರಾಮಕ್ಕೆ ಮನೆ ಮಗ ಹಾಗೂ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಗಮಿಸುತ್ತಿದ್ದಂತೆ ಕುಟುಂಬಸ್ಥರ ಮೊಗದಲ್ಲಿ ಸಂತಸ ಮೂಡಿತು.

ಬಿಎಸ್​​ವೈ, ಮನೆ ದೇವರಿಗೆ ಪೂಜೆ ಸಲ್ಲಿಸಿ ನಂತರ ಮನೆಮಂದಿಯೊಂದಿಗೆ ಮಾತನಾಡಿ, ಊಟ ಮಾಡಿ ಅಲ್ಲಿಂದ ನಿರ್ಗಮಿಸಿದರು. ಈ ಸಂಬಂಧ 'ಈಟಿವಿ ಭಾರತ್​'ನೊಂದಿಗೆ ಮಾತನಾಡಿದ ಯಡಿಯೂರಪ್ಪರ ಅತ್ತಿಗೆ ಶಾರದಮ್ಮ, ಜನಪರ ಕಾಳಜಿಯಿಂದ ಇವರು ಎತ್ತರಕ್ಕೆ ಬೆಳೆದಿದ್ದಾರೆ. ನನ್ನ ಆಯಸ್ಸನ್ನು ಕೂಡ ಅವರಿಗೇ ಧಾರೆ ಎರೆಯುತ್ತೀನಿ. ಮುಂದಿನ‌ ದಿನಗಳಲ್ಲಿ ಅವರು ಮತ್ತಷ್ಟು ಅಭಿವೃದ್ಧಿ ಕಾರ್ಯ ಮಾಡಲಿ ಎಂದು ಬಿಎಸ್​​ವೈಗೆ ಶುಭಹಾರೈಸಿದರು.

ಬಿಎಸ್​ವೈಗೆ ಶುಭಹಾರೈಸಿದ ಕುಟುಂಬಸ್ಥರು

ಶಾರದಮ್ಮ ಅವರ ಪುತ್ರ ವಿಜಯಕುಮಾರ್ ಮಾತನಾಡಿ, ಪ್ರಮಾಣ ವಚನ ಸ್ವೀಕರಿಸಿದ ತಕ್ಷಣವೇ ಹುಟ್ಟೂರಿಗೆ ಬರಬೇಕು. ಗ್ರಾಮದ ದೇವರ ದರ್ಶನ ಪಡೆಯಬೇಕು ಎಂದು ಅಲ್ಲಿಂದ ಬಂದಿದ್ದನ್ನು ನೋಡಿ ಹಾಗೂ ಅವರು ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿರುವುದು ತುಂಬಾ ಸಂತೋಷವಾಗಿದೆ ಎಂದು ಹೇಳಿದರು.

ABOUT THE AUTHOR

...view details