ಕರ್ನಾಟಕ

karnataka

ETV Bharat / state

ಹುಬ್ಬಳ್ಳಿ ಗಲಭೆಗೆ ಎರಡೂ ರಾಷ್ಟ್ರೀಯ ಪಕ್ಷಗಳೇ ಕಾರಣ: ಎಚ್.ಡಿ.ದೇವೇಗೌಡ - ಜನತಾ ಜಲದಾರೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಹೆಚ್​ಡಿಡಿ

ಕಾಂಗ್ರೆಸ್ ಮತ್ತು ಬಿಜೆಪಿಯವರು ಜನರನ್ನು ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ. ಇದು ದೇಶಕ್ಕೆ ಮಾರಕ. ಹುಬ್ಬಳ್ಳಿ ಗಲಭೆಗೆ ಎರಡೂ ರಾಷ್ಟ್ರೀಯ ಪಕ್ಷಗಳೇ ಕಾರಣ ಎಂದು ಎಚ್.ಡಿ.ದೇವೇಗೌಡ ಹೇಳಿದ್ದಾರೆ.

ಮಂಡ್ಯದಲ್ಲಿ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಹೇಳಿಕೆ
ಮಂಡ್ಯದಲ್ಲಿ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಹೇಳಿಕೆ

By

Published : Apr 20, 2022, 9:37 PM IST

ಮಂಡ್ಯ:ಹುಬ್ಬಳ್ಳಿಯಲ್ಲಿ ನಡೆದ ಗಲಭೆಗೆ ಎರಡು ರಾಷ್ಟ್ರೀಯ ಪಕ್ಷಗಳೇ ಕಾರಣ. ಮೊದಲು ಹಿಜಾಬ್‌ನಿಂದ ಶುರುವಾದ ಘಟನೆ ಈಗ ಅನೇಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿಯವರು ಜನರನ್ನು ಒಡೆದಾಳುವ ನೀತಿಯ ಅನುಸರಿಸುತ್ತಿದ್ದಾರೆ. ಇದು ದೇಶಕ್ಕೆ ಮಾರಕ ಎಂದು ಮಂಡ್ಯದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿಕೆ ನೀಡಿದ್ದಾರೆ.


ಇಂದು ಮಂಡ್ಯಕ್ಕೆ ಆಗಮಿಸಿದ ಅವರು, ಜನತಾ ಜಲಧಾರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಾನು ಈದ್ಗಾ ಮೈದಾನ ವಿಚಾರ ಬಗೆಹರಿಸುವ ವೇಳೆ ಹೀಗೆಯೇ ಮಾಡಿದ್ರು. ಒಬ್ಬ ಮಾಜಿ ಮಂತ್ರಿ ಹುಬ್ಬಳ್ಳಿಯವರೇ ವಿರೋಧ ಮಾಡಿದ್ರು. ನಮ್ಮ ಪಾರ್ಟಿಗೆ ಡ್ಯಾಮೇಜ್ ಎಂದು ಅವರನ್ನು ಹೊರಹಾಕಿದೆ. ಯಡಿಯೂರಪ್ಪ ಅವರು ಹೇಗೆ ಮಾಡ್ತೀರಿ ನೋಡ್ತಿನಿ ಅಂದ್ರು. ಸರ್ಕಾರಕ್ಕೆ ಶಕ್ತಿ ಇದೆ, ಏನು ಮಾಡಬೇಕು ಅಂತ ಗೊತ್ತಿದೆ. ನೀವು ಎಷ್ಟು ಕೂಗಿದ್ರೂ ನಾನು ಹೆದರುವುದಿಲ್ಲ ಅಂತ ಹೇಳಿ, ಎಲ್ಲೆಲ್ಲಿ ಯಾರನ್ನು ಅರೆಸ್ಟ್ ಮಾಡಿಸಬೇಕೋ ಮಾಡಿದೆ ಎಂದರು.

ಆ ಮಕ್ಕಳು ಬಟ್ಟೆ ಹಾಕಿಕೊಂಡು ಬರಲು ಹೊಸದಾಗಿ ಶುರು ಮಾಡಿದ್ದಾರಾ?. ಇದಕ್ಕೆ ಯಾರು ಕಾರಣ?, ಈ ವಿಚಾರದ ಬಗ್ಗೆ ಚರ್ಚೆ ಮಾಡಲ್ಲ. ನಾನು ಕಾವೇರಿ ಹೋರಾಟ ಮಾಡ್ತೇನೆ. ಇದಕ್ಕೆ ಸಿದ್ದರಾಮಯ್ಯ ಉತ್ತರ ಕೊಡಬೇಕು ಎಂದು ಹೇಳಿದರು.

ಇದನ್ನೂ ಓದಿ:ನಿಮ್ಮ ಬದುಕು ಸರಿಯಾಗಬೇಕಿದ್ದರೆ ಸ್ವತಂತ್ರವಾಗಿ ನಮಗೆ ಅಧಿಕಾರ ಕೊಡಿ: ಹೆಚ್​ಡಿಕೆ

For All Latest Updates

TAGGED:

ABOUT THE AUTHOR

...view details