ಕರ್ನಾಟಕ

karnataka

ETV Bharat / state

ಮಂಡ್ಯ: ಸೆಣಸಾಡಿ ಪ್ರಾಣ ಬಿಟ್ಟ ಚಿರತೆ - ನಾಯಿ! - Annechakanahalli of Mandya

ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಅಣ್ಣೆಚಾಕನಹಳ್ಳಿ ಗ್ರಾಮದಲ್ಲಿ ಸೆಣಸಾಟ ನಡೆಸಿ ಚಿರತೆ ಹಾಗೂ ನಾಯಿ ಮೃತಪಟ್ಟಿವೆ.

both leopard and dog died during fight in Mandya
ಸೆಣೆಸಾಡಿ ಪ್ರಾಣಬಿಟ್ಟ ಚಿರತೆ - ನಾಯಿ

By

Published : Feb 5, 2021, 3:19 PM IST

ಮಂಡ್ಯ: ಸೆಣಸಾಟದಲ್ಲಿ ಚಿರತೆ ಹಾಗೂ ನಾಯಿ ಸಾವನ್ನಪ್ಪಿದ ಘಟನೆ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಅಣ್ಣೆಚಾಕನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಸೆಣಸಾಡಿ ಪ್ರಾಣಬಿಟ್ಟ ಚಿರತೆ - ನಾಯಿ

ನಿನ್ನೆ ರಾತ್ರಿ ಅಣ್ಣೆಚಾಕನಹಳ್ಳಿ ಗ್ರಾಮಕ್ಕೆ ನುಗ್ಗಿದ ಎಂಟು ತಿಂಗಳ ಚಿರತೆ, ನಾಯಿ ಬೇಟೆಯಾಡಲು ಪ್ರಯತ್ನಿಸಿದೆ. ಆದರೆ, ಈ ಫೈಟ್​ನಲ್ಲಿ ಎರಡೂ ಪ್ರಾಣಿಗಳು ಪ್ರಾಣ ಬಿಟ್ಟಿವೆ.

ಇದನ್ನೂ ಓದಿ:ಭೀಕರ ರಸ್ತೆ ಅಪಘಾತ: ಮದುವೆಗೆ ಹೊರಟವರು ಮಸಣ ಸೇರಿದರು..!

ವಿಷಯ ತಿಳಿದು ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿ ಪ್ರಾಣಿಗಳ ಕಳೇಬರವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ABOUT THE AUTHOR

...view details