ಕರ್ನಾಟಕ

karnataka

By

Published : Dec 2, 2019, 8:20 PM IST

ETV Bharat / state

ಚೆಲುವರಾಯಸ್ವಾಮಿ ರಾಜಕೀಯ ವ್ಯಬಿಚಾರಿ, ತಲೆಹಿಡುಕ: ಜೆಡಿಎಸ್​ ಶಾಸಕ ಸುರೇಶ್​​​ಗೌಡ

ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಸೀರೆ ಹಂಚುತ್ತಿದ್ದಾರೆ ಎಂದು ಜೆಡಿಎಸ್ ಸಮಾವೇಶದಲ್ಲಿ ಸೀರೆ ಪ್ರದರ್ಶಿಸಿ ಕಾರ್ಯಕರ್ತರು, ಮತದಾರರು ಜಾಗೃತಿ ವಹಿಸುವಂತೆ ಕಾರ್ಯಕರ್ತ ಬ್ಯಾಲದಕೆರೆ ನಂಜಪ್ಪ ಮನವಿ ಮಾಡಿದ್ದಾರೆ.

BJP candidate Narayana Gowda is sharing a saree in Mandya
ಜೆಡಿಎಸ್​ ಶಾಸಕ ಸುರೇಶ್​​​ಗೌಡ

ಮಂಡ್ಯ: ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಸೀರೆ ಹಂಚುತ್ತಿದ್ದಾರೆ ಎಂದು ಜೆಡಿಎಸ್ ಸಮಾವೇಶದಲ್ಲಿ ಸೀರೆ ಪ್ರದರ್ಶಿಸಿ ಕಾರ್ಯಕರ್ತರು, ಮತದಾರರು ಜಾಗೃತಿ ವಹಿಸುವಂತೆ ಕಾರ್ಯಕರ್ತ ಬ್ಯಾಲದಕೆರೆ ನಂಜಪ್ಪ ಮನವಿ ಮಾಡಿದ್ದಾರೆ.

ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ವಿತರಿಸಿದ್ದಾರೆ ಎನ್ನಲಾದ ಸೀರೆಗಳನ್ನು ಪ್ರದರ್ಶಿಸಿದ ಬ್ಯಾಲದಕೆರೆ ನಂಜಪ್ಪ, ಈ ಸೀರೆ ನಾರಾಯಣಗೌಡ ಕೊಟ್ಟಿದ್ದಾರೆ. ಅವರ ಆಮಿಷಗಳಿಗೆ ಯಾರೂ ಮರಳಾಗಬೇಡಿ ಎಂದು ಕೇಳಿಕೊಂಡರು.

ಜೆಡಿಎಸ್​ ಶಾಸಕ ಸುರೇಶ್​​​ಗೌಡ

ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಅವರ ಪರಿಸ್ಥಿತಿ ರಾಜ್ಯದ ಬಿಜೆಪಿಗೂ ಬರಲಿದೆ. ಬಿ.ಎಸ್​​.ಯಡಿಯೂರಪ್ಪ 4 ತಿಂಗಳ ಸಿಎಂ ಆಗ್ತಾರೆ. ಚುನಾವಣೆ ಮುಗಿದ ನಂತರ ರಾಜೀನಾಮೆ ನೀಡ್ತಾರೆ ಎಂದು ಜೆಡಿಎಸ್​ ಶಾಸಕ ಸುರೇಶ್​ಗೌಡ ಭವಿಷ್ಯ ನುಡಿದರು.

ಚಲುವರಾಯಸ್ವಾಮಿ ರಾಜಕೀಯ ವ್ಯಬಿಚಾರಿ. ವ್ಯಬಿಚಾರಿ ಎಂದರೆ ತಲುಹಿಡುಕ ಎಂದು ಅರ್ಥೈಸಿದ ಸುರೇಶ್ ಗೌಡ ಮತದಾರರು ಎಚ್ಚರಿಕೆ ವಹಿಸುವಂತೆ ಮನವಿ ಮಾಡಿದರು.

ಮೊಬೈಲ್ ಭಾಷಣ ಮಾಡಿದ ಮಾಜಿ ಸಿಎಂ: ಇದೇ ವೇಳೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾಜಿ ಸಿಎಂ ಕುಮಾರಸ್ವಾಮಿ ಮೊಬೈಲ್ ಮೂಲಕವೇ ಸಂದೇಶ ನೀಡಿದರು. ಪಕ್ಷದ ಅಭ್ಯರ್ಥಿ ಬೆಂಬಲಿಸುವಂತೆ ಮನವಿ ಮಾಡಿದರು.

ABOUT THE AUTHOR

...view details